ಪುತ್ತೂರು: ಧೀ ಶಕ್ತಿ ಮಹಿಳಾ ಯಕ್ಷಬಳಗದಿಂದ ಗುರುವಂದನೆ

0

ಪುತ್ತೂರು: ದಶಮಾನೋತ್ಸವದ ಹೊಸ್ತಿಲಲ್ಲಿರುವ ಧೀ ಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಇವರ ವತಿಯಿಂದ ಗುರುಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯಕ್ಷಬಳಗದ ಸಾರಥಿ ಪ್ರಮೀಳಾ ಮತ್ತು ಬಾಲಿಕಾ ಯಕ್ಷ ಕಲಾವಿದೆಯರನ್ನು ತನ್ನ ಸಂಸ್ಥೆಯ ಮೂಲಕ ನಿರ್ದೇಶನ ನೀಡಿ ಬೆಳೆಸುತ್ತಿರುವ ಪದ್ಮಾ ಕೆ.ಆರ್ ಆಚಾರ್ಯರವರನ್ನು ನ್ಯಾಯವಾದಿ ಕೆ.ಆರ್.ಆಚಾರ್ಯರವರ ಮನೆಯಲ್ಲಿ ಶಿಷ್ಯ ಬಳಗದ ವತಿಯಿಂದ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಯಲಕ್ಷ್ಮೀ ವಿ.ಭಟ್, ಪ್ರೇಮ ನೂರಿತ್ತಾಯ, ಪ್ರೇಮ ಕಿಶೋರ್, ವಿನಯ ಕೇಕುಣ್ಣಾಯ, ಶೃತಿ ವಿಸ್ಮಿತ, ವಕೀಲೆ ಹೀರಾ ಉದಯ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here