ಮಾಣಿಲ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಹಿನ್ನೆಲೆ -ಜು.8ಕ್ಕೆ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಪೂರ್ವಭಾವಿ ಸಭೆ

0


ಪುತ್ತೂರು: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮಿ ಕ್ಷೇತ್ರದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ವೃತಾಚರಣೆಯ ಬೆಳ್ಳಿಹಬ್ಬ ಮಹೋತ್ಸವಕ್ಕೆ ಸಂಬಂಧಿಸಿ ಜು.8ರಂದು ಸಂಜೆ ಗಂಟೆ 5.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಪೂರ್ವಭಾವಿ ಸಭೆ ಮತ್ತು ತಾಲೂಕು ಸಮಿತಿ ರಚನೆಯ ಸಭೆ ನಡೆಯಲಿದೆ.


ಈಗಾಗಲೇ ಜಿಲ್ಲೆಯಾದ್ಯಂತ ತಾಲೂಕುಗಳಲ್ಲಿ ವಲಯ ಸಮಿತಿಯನ್ನು ಮಾಡಲಾಗುತ್ತಿದೆ ,ಪ್ರತೀ ಗ್ರಾಮಗಳಿಂದ ಪ್ರಮುಖರನ್ನು ಸೇರಿಸಿ ಆ ಮೂಲಕ ಗ್ರಾಮ ಸಮಿತಿಗಳ ರಚನೆ,ಹಾಗು 48 ದಿನಗಳ ವರಮಹಾಲಕ್ಷ್ಮಿ ವ್ರತಾಚಾರಣೆಯಲ್ಲಿ ಸಮಿತಿಗಳ ಭಾಗವಹಿಸುವಿಕೆ, ಜವಾಬ್ಧಾರಿಗಳ ಕುರಿತಾಗಿ ಪುತ್ತೂರು ತಾಲೂಕಿನ ಪ್ರಮುಖರ ಪೂರ್ವಭಾವಿ ಸಭೆಯನ್ನು ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ನಡೆಯಲಿದೆ ಸಂಘಟಕ ನವೀನ್ ಕುಲಾಲ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here