ಶ್ರೀ ಗುರು ಸೇವಾ ಬಳಗ, ವಜ್ರಮಾತಾ ವಿಕಾಸ ಕೇಂದ್ರ, ಧ.ಗ್ರಾಮಾಭಿವೃದ್ಧಿ ಯೋಜನೆಯಿಂದ ನೇಜಿ ನೆಡುವಿಕೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ 62ನೇ ಹುಟ್ಟುಹಬ್ಬ ಹಾಗೂ ಗ್ರಾಮೋತ್ಸವದ ಅಂಗವಾಗಿ ಶೀಗುರು ಸೇವಾ ಬಳಗ ಪುತ್ತೂರು ಮತ್ತು ವಜ್ರಮಾತಾ ವಿಕಾಸ ಕೇಂದ್ರ ಪುತ್ತೂರು ವತಿಯಿಂದ ಶೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಹಾರಾಡಿ ರೈಲ್ವೇ ಟ್ರ್ಯಾಕ್ ಬಳಿಯಿರುವ ನಿವೃತ್ತ ಅಧಿಕಾರಿ ಅಧಿಕಾರಿ ಲಿಂಗರವರ ಗದ್ದೆಯಲ್ಲಿ ನೇಜಿ ನೆಡುವ ಕಾರ್‍ಯಕ್ರಮ ನಡೆಯಿತು.

ಯಂತ್ರದ ಮೂಲಕ ನೇಜಿ ನೆಡುವ ಕಾರ್‍ಯಕ್ರಮಕ್ಕೆ ಲಿಂಗರವರು ಚಾಲನೆ ನೀಡಿದರು. ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಉಮೇಶ್ ಯಂತ್ರದ ಮೂಲಕ ನೇಜಿ ನೆಡುವ ಬಗ್ಗೆ ಮಾಹಿತಿ ನೀಡಿದರು. ಗುರುದೇವಾ ಸೇವಾ ಬಳಗದ ಸಲಿಹೆಗಾರ ಮೋನಪ್ಪ ಪೂಜರಿ, ಗುರುದೇವಾ ಸೇವ ಬಳಗದ ಅಧ್ಯಕ್ಷ ಸುಧೀರ್ ನೋಂಡಾ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ, ವಜ್ರಮಾತಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯಾನ ರೈ, ಕಾರ್ಯದರ್ಶಿ ಶಾರದ ಕೇಶವ್, ಸದಸ್ಯರಾದ ಭವಾನಿ ಶಂಕರ್ ಶೆಟ್ಟಿ, ತಾರಾನಾಥ್, ತಾರಾ ಸುಂದರ್ ರೈ ಉಪಸ್ಥಿತರಿದ್ದರು. ಗುರುದೇವ ಸೇವ ಬಳಗದ ಸದಸ್ಯರು, ವಜ್ರಮಾತಾ ಕೇಂದ್ರದ ಸದಸ್ಯರು, ಗುರುಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here