ಬಲ್ನಾಡು ಬಿಲ್ಲವ ಗ್ರಾಮಸಮಿತಿ ವಾರ್ಷಿಕ ಮಹಾಸಭೆ,ಪುಸ್ತಕ ವಿತರಣೆ, ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ಬಲ್ನಾಡು ವತಿಯಿಂದ ವಾರ್ಷಿಕ ಮಹಾಸಭೆ ಮತ್ತು ಪುಸ್ತಕ ವಿತರಣೆ ಹಾಗು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಬಲ್ನಾಡು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕಂಟ್ರಾಣಿಮೂಲೆ ಅಧ್ಯಕ್ಷತೆ ವಹಿಸಿದ್ದರು. ಬಲ್ನಾಡು ಬಿಲ್ಲವ ಗ್ರಾಮಸಮಿತಿ ಗೌರವಾಧ್ಯಕ್ಷ ಬಾಬು ಪೂಜಾರಿ ಕುಕ್ಕುತ್ತಡಿ ಗೌರವಾಧ್ಯಕ್ಷತೆಯಲ್ಲಿ ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ಗೆಣಸಿನಕುಮೇರು ಉದ್ಘಾಟನೆ ನೆರವೇರಿಸಿದರು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಪುತ್ತೂರು ಬಿಲ್ಲವ ಸಂಘ ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲ ಪಡ್ನೂರು, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ಬಾಯರು, ಬಲ್ನಾಡು ಬಿಲ್ಲವ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಶಕುಂತಲ ಗೋಪಾಲ ಪೂಜಾರಿ ಮಚ್ಚಿಮಲೆ, ವಲಯ ಸಂಚಾಲಕ ಕಿರಣ್ ಬಸಂತಕೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ನೂತನ ಪದಾಧಿಕಾರಿಗಳ ಆಯ್ಕೆ ಈ ಸಂದರ್ಭದಲ್ಲಿ ನಡೆಯಿತು. ಅಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ ಕಂಟ್ರಾಣಿಮೂಲೆ ಬಲ್ನಾಡು, ಉಪಾಧ್ಯಕ್ಷರಾಗಿ ಶಕುಂತಲ ಗೋಪಾಲ ಪೂಜಾರಿ ಮಚ್ಚಿಮಲೆ, ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಬಿ.ಕೆ ಕುಕ್ಕುತ್ತಡಿ, ಜತೆ ಕಾರ್ಯದರ್ಶಿಯಾಗಿ ಗೋಪಾಲ ಪೂಜಾರಿ ಮಚ್ಚಿಮಲೆ ಆಯ್ಕೆಯಾದರು. ಬಲ್ನಾಡು ಗ್ರಾ.ಪಂ ಮಾಜಿ ಸದಸ್ಯ ನವಿನ್ ಕರ್ಕೇರ ರಾಂಬೈಲು ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here