![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಮಾರ್ಗದರ್ಶನದಲ್ಲಿ ಬೆಟ್ಟಂಪಾಡಿ ವಲಯದ ರೆಂಜ ಕಾರ್ಯಕ್ಷೇತ್ರದಲ್ಲಿ ಸಿಎಂ ನಿಸರ್ಗ ಎಂಬ ನೂತನ ಸ್ವಸಹಾಯ ಸಂಘವನ್ನು ಜು.10 ರಂದು ಉದ್ಘಾಟಿಸಲಾಯಿತು.
ಬೆಟ್ಟಂಪಾಡಿ ವಲಯದ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಪೇರಲ್ತಡ್ಕ ಸಂಘಕ್ಕೆ ದಾಖಲಾತಿ ಪುಸ್ತಕ ನೀಡಿ ಶುಭ ಹಾರೈಸಿದರು.ರೆoಜ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ದೆಯ್ಯರಡ್ಕ ಪದಾಧಿಕಾರಿಗಳಾದ ನಳಿನಿ, ಯಾಮಿನಿ ಉಪಸ್ಥಿತರಿದ್ದರು.ರೆoಜ ಒಕ್ಕೂಟದ ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಸ್ವಾಗತಿಸಿ ವಂದಿಸಿದರು. ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಚಂದ್ರಶೇಖರ್ ಯೋಜನೆಯ ನಿಯಮಗಳ ಬಗ್ಗೆ ತಿಳಿಸಿದರು.