ಪುತ್ತೂರಿನಲ್ಲಿ ನಕಲಿ ದಾಖಲೆ ಸೃಷ್ಠಿ ಕಚೇರಿಗೆ ಅಧಿಕಾರಿಗಳಿಂದ ದಾಳಿ-ಹಲವು ಗ್ರಾ.ಪಂ ಮೊಹರು ವಶಕ್ಕೆ

0

ಪುತ್ತೂರು: ಭೂದಾಖಲೆ ಸಹಿತ ಹಲವಾರು ವಿಚಾರಗಳಿಗೆ ನಿರಾಪೇಕ್ಷಣಾ ಪತ್ರದ ನಕಲಿ ದಾಖಲೆ ಸೃಷ್ಠಿ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಪಡೀಲ್ ನಲ್ಲಿರುವ ಕಚೇರಿಯೊಂದಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪಡೀಲ್‌ ನ ವಿಶ್ವಾನಾಥ್‌ ಎಂಬವರಿಗೆ ಸೇರಿದ ಬಿ ಬಿ ಇಲೆಕ್ಟ್ರಿಕಲ್ಸ್‌‌ ಮತ್ತು ಪ್ಲಂಬಿಂಗ್‌ ವರ್ಕ್ ಕಚೇರಿಗೆ ತಾ.ಪಂ ಕಾರ್ಯಾನಿರ್ವಾಹಕ ಅಧಿಕಾರಿ ನವೀನ್‌ ಭಂಡಾರಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪುತ್ತೂರು ಮತ್ತು ಕಡಬ ಎಲ್ಲಾ ಗ್ರಾ.ಪಂ ಮೊಹರು ಮತ್ತು ಬಂಟ್ವಾಳ ತಾಲೂಕಿನ 3ಗ್ರಾ.ಪಂ ಗಳ ಪಿಡಿಒ ಸೀಲ್‌, ನಗರ ಸಭೆಯ ಅಧಿಕಾರಿಗಳ ಮೊಹರುಗಳನ್ನು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here