ರೆಂಜಿಲಾಡಿ: ಆನೆ ದಾಳಿಗೆ ಬಿದ್ದ ಮರ, ಮೂರು ವಿದ್ಯುತ್ ಕಂಬಕ್ಕೆ ಹಾನಿ

0

ಕಡಬ: ಆನೆ ದಾಳಿಯಿಂದ ಬೃಹತ್ ಮರವೊಂದು ಉರುಳಿ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಹಾನಿಗೊಂಡಿರುವ ಘಟನೆ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ನಡೆದಿದೆ.


ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಬಾಂತಾಜೆ ಸಂಪರ್ಕ ರಸ್ತೆಯ ಬಾಂತಾಜೆ ಸಮೀಪ ಜು.11ರ ರಾತ್ರಿ ಈ ಘಟನೆ ನಡೆದಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿನ ಬೃಹತ್ ಈನ್ದ್ ಮರವನ್ನು ಕಾಡಾನೆ ಉರುಳಿಸಿ ಹಾಕಿ ಪುಡಿಗೈದಿದೆ. ಮರವು ವಿದ್ಯುತ್ ತಂತಿಯ ಮೇಲೆಯೇ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಹಾನಿಗೊಂಡಿದೆ. ಒಂದು ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಒಂದು ಕಂಬ ಮುರಿದು ಬಿದ್ದಿದೆ, ಇನ್ನೊಂದು ಬುಡದಿಂದಲೇ ಬಿದ್ದಿದೆ. ಮೆಸ್ಕಾಂ ನವರು ದುರಸ್ತಿ ಕಾರ್ಯ ನಡೆಸಿದ್ದಾರೆ.

LEAVE A REPLY

Please enter your comment!
Please enter your name here