ಜು.23 – ಸವಣೂರಿನಲ್ಲಿ ಕೆಸರ್‌ಡೊಂಜಿ ದಿನ- ಸಮಾಲೋಚನಾ ಸಭೆ

0

ಪುತ್ತೂರು: ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ಜು. 23 ರಂದು ಸವಣೂರು ಬಸದಿಯ ಎದುರಿನಲ್ಲಿರುವ ನ್ಯಾಯವಾದಿ ನಿರ್ಮಲ್‌ಕುಮಾರ್ ಜೈನ್‌ರವರ ಗದ್ದೆಯಲ್ಲಿ ಕೆಸರ್‌ಡೊಂಜಿ ದಿನ ಕಾರ್‍ಯಕ್ರಮ ನಡೆಯಲಿದೆ.

ಇದರ ಪೂರ್ವ ಭಾವಿ ಸಭೆಯು ಸವಣೂರು ಯುವ ಸಭಾಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಟಲದ ಅಧ್ಯಕ್ಷ ಜಿತಾಕ್ಷ ಜಿ. ವಹಿಸಿದ್ದರು. ಯುವಕ ಮಂಡಲದ ಮಾರ್ಗದರ್ಶಕರಾದ ಗಿರಿಶಂಕರ್ ಸುಲಾಯ ದೇವಸ್ಯ, ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಸುರೇಶ್ ರೈ ಸೂಡಿಮುಳ್ಳು, ಮಹೇಶ್ ಕೆ. ಸವಣೂರು, ಪ್ರಕಾಶ್ ಮಾಲೆತ್ತಾರು, ದಯಾನಂದ ಮೆದು, ರಾಜೇಶ್ ಇಡ್ಯಾಡಿ, ಹಿತೇಶ್ ಮೆದು, ಚೇತನ್ ಕುಮಾರ್ ಕೋಡಿಬೈಲು, ಸತೀಶ್ ಬಲ್ಯಾಯ, ಬಾಲಚಂದ್ರ ಕನಡಕುಮೇರು, ತಾರಾನಾಥ ಕಾಯರ್ಗ, ಪ್ರಮೋದ್ ಕೆ.ಆರ್.ಕೋಡಿಬೈಲು, ಶೇಷಪ್ಪ ನಾಯ್ಕ ಕನಡಕುಮೇರು ಸಹಿತ ಅನೇಕ ಮಂದಿ ಭಾಗವಹಿಸಿದರು. ಯುವಕ ಮಂಡಲದ ಕಾರ್‍ಯದರ್ಶಿ ಕೀರ್ತನ್ ಕೋಡಿಬೈಲು ಸ್ವಾಗತಿಸಿ, ವಂದಿಸಿದರು. ಕೆಸರ್‌ಡೊಂಜಿ ದಿನ ಕಾರ್‍ಯಕ್ರಮದಲ್ಲಿ ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಓಟ, ನಿಧಿ ಶೋಧನೆ, ಅಪ್ಪಂಗಾಯಿ ಮುಂತಾದ ಸ್ವರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here