ಮುಕ್ರಂಪಾಡಿ:ಬಾಡಿಗೆ ಮನೆಯಲ್ಲಿದ್ದನಾಗಮಂಗಲದ ಟೈಲರ್, ಮಗ ನಾಪತ್ತೆ

0

ಪುತ್ತೂರು:ಮುಕ್ರಂಪಾಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ನಾಗಮಂಗಲದ ಟೈಲರ್ ಮತ್ತು ಮಗ ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಪುತ್ತೂರು ಪೊಲೀಸರಿಗೆ ದೂರು ನೀಡಿದ್ದಾರೆ.


ಮೂಲತಃ ಮಂಡ್ಯ ನಾಗಮಂಗಲ ನಿವಾಸಿಯಾಗಿದ್ದು ಮುಕ್ರಂಪಾಡಿಯ ಸುಲೈಮಾನ್ ಎಂಬವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಜಿ.ಬಿ.ಉಲ್ಲಾಖಾನ್ ಎಂಬವರು ನಾಪತ್ತೆಯಾದವರು.ಅವರು 2022ನೇ ಜುಲೈ ತಿಂಗಳಲ್ಲಿ ಪುತ್ತೂರಿಗೆ ಬಂದು ಮುಕ್ರಂಪಾಡಿಯಲ್ಲಿ ಸುಲೈಮಾನ್ ಎಂಬವರ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.ವೃತ್ತಿಯಲ್ಲಿ ಟೈಲರಿಂಗ್ ಮಾಡುತ್ತಿರುವ ಸುಲೈಮಾನ್ ಅವರು ಮನೆಯಲ್ಲೇ ಟೈಲರಿಂಗ್ ಕೆಲಸ ನಿರ್ವಹಿಸುತ್ತಿದ್ದರು.ಅವರ ಪತ್ನಿ ಸಾಜಿದಾ ಅವರು ಕೂಲಿ ಕೆಲಸ ಮಾಡುತ್ತಿದ್ದರು.ಮೇ 9ರಂದು ಸಾಜಿದಾ ಅವರು ಕೂಲಿ ಕೆಲಸಕ್ಕೆ ಹೋಗುವಾಗ ತನ್ನ ಮಗಳನ್ನೂ ಕರೆದುಕೊಂಡು ಹೋಗಿದ್ದರು.ಸಂಜೆ ಕೆಲಸ ಮುಗಿಸಿ ಹಿಂದಿರುಗಿ ಬರುವಾಗ ಗಂಡ ಉಲ್ಲಾಖಾನ್ ಮತ್ತು ಮಗ ನಾಪತ್ತೆಯಾಗಿದ್ದರು.ಮನೆಯಲ್ಲಿದ್ದ ಟೈಲರಿಂಗ್ ಮೆಷಿನ್ ಕೂಡಾ ನಾಪತ್ತೆಯಾಗಿದೆ.ಈ ಕುರಿತು ಸಾಜಿದಾ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here