ನಮಗೆ ಕನಿಷ್ಟ ವೇತನ ಮಾಸಿಕ ರೂ.10 ಸಾವಿರ ಸಹಿತ ವಿವಿಧ ಬೇಡಿಕೆಯನ್ನು ಆಗ್ರಹಿಸಿ ಶಾಲೆಗಳಲ್ಲಿ ಅಡುಗೆ ನಿಲ್ಲಿಸಿ ಪ್ರತಿಭಟನೆ

0

ಪುತ್ತೂರು: ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಪುತ್ತೂರು ಮತ್ತು ಕಡಬ ತಾಲೂಕು ಸಮಿತಿ ಜಂಟಿ ಆಶ್ರಯದಲ್ಲಿ ನಮ್ಮ ರಾಜ್ಯ ಸಂಘದ ಕರೆಯಂತೆ, ನಮ್ಮ ವೇತನ ಮಾಸಿಕ ರೂ.10 ಸಾವಿರ ಸಹಿತ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಹಾಗೂ ಕಾಂಗ್ರೆಸ್ ತನ್ನ ಗ್ಯಾರೆಂಟಿಯನ್ನು ಮೊದಲು ಈಡೇರಿಸಲು ಆಗ್ರಹಿಸಿ ಜು.14ಕ್ಕೆ ಪುತ್ತೂರು ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಸಂಘದ ರಾಜ್ಯ ಮುಖಂಡ ನ್ಯಾಯವಾದಿ ಬಿ.ಎಂ ಭಟ್ ಮಾತನಾಡಿದರು. ಪಿ‌.ಕೆ ಸತೀಶನ್ ಪ್ರತಿಭಟನೆಗೆ ಚಾಲನೆ ನೀಡಿದರು. ಅಕ್ಷರದಾಸೋಹ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ಸುಧಾ, ಕಾರ್ಯದರ್ಶಿ ರೇವತಿ, ಕಡಬ ತಾಲೂಕು ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ನಳಿನಿ, ರಾಜ್ಯ ಸಮಿತಿ ವೇದ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು‌.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here