ಬಜರಂಗದಳ ನಾಯಕ ಶರಣ್ ಪಂಪ್ ವೆಲ್ ಬಗ್ಗೆ ಅವಮಾನಕರ ಪೋಸ್ಟ್-ಕಡಬ ಪ್ರಖಂಡ ವಿ.ಹಿಂ.ಪ. ವತಿಯಿಂದ ಕಡಬ ಠಾಣೆಗೆ ದೂರು

0

ಕಡಬ: ಬಜರಂಗದಳ ನಾಯಕ ಶರಣ್ ಪಂಪುವೆಲ್ ರವರ ಮೇಲೆ ಅವಮಾನಕರ ಪೋಸ್ಟ್ ,ವಿಡಿಯೋ ಹಾಕಿರುವ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕಡಬ ವಿ.ಹಿಂ.ಪ. ಬಜರಂಗದಳ ವತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ.
ಶರಣ್ ಪಂಪ್ ವೆಲ್ ಅವರು ಸಂಘಟನೆ ಸಮಾಜದಲ್ಲಿ ನಿರಂತರವಾಗಿ ಸೇವಾಕಾರ್ಯಗಳನ್ನು ಮಾಡುತ್ತಾ ಅಶಕ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಿಕೊಂಡು ಬರುತಿದ್ದು, ಜೊತೆಗೆ ಸಮಾಜದಲ್ಲಿ ಯುವಕರಿಗೆ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ ಅಂತಹ ಆಂಜನೇಯ ದೇವರ ಹೆಸರಿನ ಸಂಘಟನೆಯನ್ನು “ಕರಾವಳಿ ರಶೀದ್ ” ಎಂಬ ಟ್ರೊಲ್ ಪೇಜ್ ಮತ್ತು ನಫೀಝ್ ಅಹ್ಮದ್ ಎಂಬ ಪೇಜ್ ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯನ್ನು ಅಶ್ಲೀಲವಾಗಿ ಮತ್ತು ಮಾನಹಾನಿಕಾರಕ ಸುಳ್ಳು ಸುದ್ದಿಯ ವಿಡಿಯೋವನ್ನು ಹಂಚಿದ್ದು, ಅಲ್ಲದೆ ನಮ್ಮ ನಾಯಕರಾದ ನಮ್ಮ ಪ್ರಾಂತ ಸಹ ಕಾರ್ಯದರ್ಶಿಯವರಾದ ಶರಣ್ ಪಂಪುವೆಲ್ ಅವರ ಮೇಲೆ ಅಶ್ಲೀಲವಾಗಿ ಎಡಿಟ್ ಮಾಡಿ ಹಂಚಿ ಅವರ ಮಾನಹಾನಿ ಮಾಡಿರುವುದು ಅಲ್ಲದೆ ಇಡೀ ಸಂಘಟನೆಯನ್ನು ಅವಮಾನ ಮಾಡುತ್ತಿದ್ದಾರೆ, ಇದರಿಂದಾಗಿ ಸಮಾಜದ ಸ್ವಾಸ್ಥ್ಯ್ಸ ಕೆಡುವಂತಹ ಭಯ ನಮಗಿದೆ. ನಮ್ಮ ಸಂಘಟನೆಯ ಬಗ್ಗೆಯೂ ದ್ವೇಷ ಪೂರಿತವಾದ ಸಂದೇಶವನ್ನು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಹಿಂದು -ಮುಸ್ಲಿಂ ಮದ್ಯೆ ದ್ವೇಷ ಬಿತ್ತುವ ಉದ್ದೇಶದಿಂದ ಕಳುಹಿಸುತ್ತಿದ್ದಾರೆ. ಹಿಂದು ಸಂಘಟನೆ ಬಜರಂಗದಳದ ಬಗ್ಗೆ ಮತ್ತು ನಮ್ಮ ನಾಯಕರ ಚಾರಿತ್ರ್ಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿ ಹಿಂದು – ಮುಸಲ್ಮಾನರ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಇಂತಹ ಹೀನ ಕೃತ್ಯ ನಡೆಸುವ ಸಾಮಾಜಿಕ ಜಾಲತಾಣ ಪೇಜ್ ಅಡ್ಮಿನ್ ಗಳನ್ನು ಹಾಗೂ ಇದನ್ನು ಹಂಚುತ್ತಿರುವ ಆರೋಪಿಗಳ ವಿರುದ್ದ ಈಗಾಗಲೇ ದೂರನ್ನು ನೀಡಿದ್ದು, ಈ ವ್ಯವಸ್ಥಿತ ಕೃತ್ಯದ ಹಿಂದಿರುವವರ ಹಾಗೂ ಈ ವಿಡಿಯೋವನ್ನು ಹಂಚುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಅವರು ದೂರಿನಲ್ಲಿ ವಿನಂತಿಸಿದ್ದಾರೆ.ಈ ಸಂದರ್ಭದಲ್ಲಿ ವಿ.ಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ,ಕಾರ್ಯದರ್ಶಿ ಪ್ರಮೋದ್ ನಂದುಗುರಿ, ಉಮೇಶ್ ಆಚಾರ್ಯ ಗೊಳಿಯಡ್ಕ, ನಗರ ಸಂಯೋಜಕ ತುಳಸಿಧರ ಬೈದ್ರಿಜಾಲ್, ಪ್ರೇಮಚಂದ್ರ ಅಜ್ಜರಮೂಲೆ ಮೊದಲಾದರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here