ಕಜೆಕ್ಕಾರು: ಗಾಳಿಗೆ ಮರ ಬಿದ್ದು ಎರಡು ಮನೆಗಳು ಧ್ವಂಸ- ಮಕ್ಕಳು ಅಪಾಯದಿಂದ ಪಾರು

0

ಉಪ್ಪಿನಂಗಡಿ: ಭಾರೀ ಗಾತ್ರದ ಮರವೊಂದು ಗಾಳಿಗೆ ಉರುಳಿ ಬಿದ್ದು ಎರಡು ಮನೆಗಳು ಧ್ವಂಸಗೊಂಡ ಘಟನೆ ಶನಿವಾರ ಸಂಜೆ ಇಲ್ಲಿನ ಹಳೆಗೇಟು ಸಮೀಪದ ಕಜೆಕ್ಕಾರು ಅಂಬೇಡ್ಕರ್ ಕಾಲನಿಯಲ್ಲಿ ನಡೆದಿದ್ದು, ಈ ಸಂದರ್ಭ ಮನೆಯೊಳಗಿದ್ದ ಮಕ್ಕಳಿಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.


ಈ ಪರಿಸರದಲ್ಲಿ ಜು.22ರಂದು (ಇಂದು) ಸಂಜೆ ಭಾರೀ ಗಾಳಿ ಬೀಸಿದ್ದು, ಇದರಿಂದಾಗಿ ಭಾರೀ ಗಾತ್ರದ ಹಲಸಿನ ಮರ ಹಾಗೂ ತೆಂಗಿನ ಮರವೊಂದು ಒಟ್ಟಿಗೆ ಅಕ್ಕಪಕ್ಕದಲ್ಲಿರುವ ಸುಂದರಿ ಮತ್ತು ಸೇಸಮ್ಮ ಅವರ ಮನೆಯ ಮೇಲೆ ಉರುಳಿ ಬಿದ್ದಿದೆ. ಗಾಳಿ ಬರುವಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸೇಸಮ್ಮ ಅವರು ಹೆದರಿ ಪಕ್ಕದ ಮನೆಗೆ ತೆರಳಿದ್ದರೆ, ಸುಂದರಿಯವರ ಮನೆಯಲ್ಲಿ ಅವರ ಮಗನ ಮಕ್ಕಳಾದ ಅಕ್ಷತಾ (11) ಹಾಗೂ ರಕ್ಷಿತಾ (10) ಮನೆಯೊಳಗೆ ಮಲಗಿದ್ದರು. ಸುಂದರಿ ಹಾಗೂ ಅವರ ಸೊಸೆ ಮೀನಾಕ್ಷಿ ಮನೆಯ ಹೊರಗೆ ಬಂದಿದ್ದರು. ಈ ಸಂದರ್ಭ ಹಲಸಿನ ಮರ ಮಗುಚಿ ಬಿದ್ದಿದ್ದು, ಅದರೊಟ್ಟಿಗೆ ತೆಂಗಿನ ಮರವೂ ಮಗುಚಿ ಬಿದ್ದಿದೆ. ಇದರಿಂದಾಗಿ ಮನೆಯ ಮೇಲ್ಚಾವಣಿ, ಗೋಡೆ ಧ್ವಂಸಗೊಂಡಿದೆ. ತಕ್ಷಣವೇ ಮನೆಯೊಳಗೆ ಮಲಗಿದ್ದ ಮಕ್ಕಳನ್ನು ಹೊರಗೆ ಕರೆತರಲಾಗಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಎರಡೂ ಮನೆಗಳ ಸಂಪೂರ್ಣ ಧ್ವಂಸಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

LEAVE A REPLY

Please enter your comment!
Please enter your name here