ಬ್ಯಾಂಕ್ ಆಫ್ ಬರೋಡಾದ 116ನೇ ಸ್ಥಾಪನಾ ದಿನಾಚರಣೆ- ಪುತ್ತೂರು ಸಾಲ್ಮರ ಅನಾಥಾಶ್ರಮಕ್ಕೆ ವಸ್ತುಗಳ ಕೊಡುಗೆ

0

ಪುತ್ತೂರು: ಬ್ಯಾಂಕ್ ಆಫ್ ಬರೋಡದ, 116 ನೇ ಸ್ಥಾಪಕ ದಿನಾಚರಣೆ ಅಂಗವಾಗಿ, ಬ್ಯಾಂಕಿನ ಕಮ್ಯುನಿಟಿ ಸರ್ವಿಸ್ ಆಶ್ರಯದಲ್ಲಿ ಅನಾಥಾಶ್ರಮಕ್ಕೆ ಬೇಕಾದ ವಸ್ತುಗಳನ್ನು ಜುಲೈ 20ರಂದು ಕೊಡುಗೆಯಾಗಿ ನೀಡಲಾಯಿತು.

ಸುಮಾರು 40 ವರ್ಷದಿಂದ ಕಾರ್ಯಚರಿಸುತ್ತಿರುವ, ಅನ್ಸಾರುದ್ದೀನ್ ಯತೀಂ ಖಾನಕ್ಕೆ, ಜುಲೈ 20ರಂದು ಭೇಟಿ ನೀಡಿದ ಬ್ಯಾಂಕ್ ಆಫ್ ಬರೋಡ ದರ್ಬೆ ಶಾಖೆಯ ಮುಖ್ಯ ವ್ಯವಸ್ಥಾಪಕ ಸಾಧಿಕ್ ಎಸ್ ಎಂ ಹಾಗೂ ಅಧಿಕಾರಿ ಶ್ರೀಕಾಂತ್ ಹಾಗು ಬ್ಯಾಂಕಿನಿಂದ ಕೊಡ ಮಾಡಿದ, ಫ್ಯಾನುಗಳು ಗ್ಯಾಸ್ ಸ್ಟವ್ ಹಾಗೂ ಉಪಕರಣಗಳನ್ನು, ಅನ್ಸಾರುದ್ದೀನ್ ಯತೀಂ ಖಾನದ ಉಪಾಧ್ಯಕ್ಷ, ನ್ಯಾಯವಾದಿ ನೂರುದ್ದೀನ್ ಸಾಲ್ಮರವರಿಗೆ ಸಂಸ್ಥೆಯ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಾಲ್ಮರ, ಉದ್ಯಮಿ ಯೂಸುಫ್ ಕಬೀರ್ ಸಾಲ್ಮರ, ನ್ಯಾಯವಾದಿ ಸಾತ್ವಿಕ್ ಆರಿಗ, ಸಂಸ್ಥೆಯ ವ್ಯವಸ್ಥಾಪಕರಾದ ಇಸ್ಮಾಯಿಲ್ ನೆಲ್ಯಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here