25 ನೇ ಅಂತರಾಷ್ಟ್ರೀಯ ಜಾಂಬೂರಿ- ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ ಏಳು ವಿದ್ಯಾರ್ಥಿಗಳು, ಓರ್ವ ಶಿಕ್ಷಕ ದಕ್ಷಿಣ ಕೊರಿಯಾಕ್ಕೆ

0

ವಿಟ್ಲ: ದೇಶಗಳ ಸಂಸ್ಕ್ರತಿಯನ್ನು ಬಿಂಬಿಸುವ ನಿಟ್ಟಿನಲ್ಲಿ Draw your Dream ಎಂಬ ಧ್ಯೇಯದೊಂದಿಗೆ ಆ. 1 ರಿಂದ ಆ.12 ರವರೆಗೆ ದಕ್ಷಿಣ ಕೊರಿಯದ ಸೀಮನ್‌ಗಾಮ್ ಜಿಯಾಲ್ಲಾಬುಕ್ (Saemangeum Jeollabuk – do) ಎಂಬಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಜಾಂಬೂರಿಗೆ ಇಲ್ಲಿನ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ 7 ವಿದ್ಯಾರ್ಥಿಗಳು ಹಾಗೂ ಒರ್ವ ಶಿಕ್ಷಕ ಆಯ್ಕೆಯಾಗಿದ್ದಾರೆ.

ಜುಲೈ 31 ಕ್ಕೆ ಮಂಗಳೂರಿನಿಂದ 48 ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರು ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ಸೌತ್ ಕೊರಿಯಕ್ಕೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸಂಸ್ಥೆಯಿಂದ ಭಾಗವಹಿಸಲಿರುವ ವಿದ್ಯಾರ್ಥಿಗಳು ಕಾರ್ತಿಕ್‌ ಎ ನ್ಯಾಮ್‌ ಗೌಡ, ಶಶಾಂಕ್‌ ಕೆ ಸಿ, ಮನೀಶ್‌ ಯು ಅಂಗಡಿ, ಕಾರ್ತಿಕ್‌ ಎ, ಸಿದ್ದಲಿಂಗೇಶ್‌ ಬಿ ಹಂಜಿ, ಅಜಯ್‌ ನಾಗೇಶ್‌ ಪ್ರಭು, ಶೌರ್ಯ ಎಸ್‌ ಗೌಡ, ಶಿಕ್ಷಕ ನಾರಾಯಣ ನಾಯಕ್‌ ಎನ್ ಇವರು ದಕ್ಷಿಣ ಕೊರಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here