ಕಾಣಿಯೂರು ಯಕ್ಷಮಿತ್ರ ಬಳಗದ ಸಭೆ

0

ಕಾಣಿಯೂರು: ಕಾಣಿಯೂರು ಯಕ್ಷಮಿತ್ರ ಬಳಗದ ಸಭೆಯು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು. ಬಳಗದ ಅಧ್ಯಕ್ಷ ಹರಿಪ್ರಸಾದ್ ರೈ ಇವರು ಅಧ್ಯಕ್ಷತೆ ವಹಿಸಿದ್ದರು. ಬಳಗದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಡಿಸೆಂಬರ್ ತಿಂಗಳಲ್ಲಿ ಕಾಣಿಯೂರಿನಲ್ಲಿ ಯಕ್ಷಗಾನ ಬಯಲಾಟ ನಡೆಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಸದಸ್ಯ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಶಿಕ್ಷಕ ಜಯಂತ್ ವೈ, ರಕ್ಷಿತ್ ಭಂಡಾರಿ, ಮೋನಪ್ಪ ಬಂಡಾಜೆ, ಸುರೇಶ್ ಓಡಬಾಯಿ, ಬಾಬು ಮಾದೋಡಿ, ಸೀತಾರಾಮ ಅನಿಲ, ಬಾಲಚಂದ್ರ ಅಬೀರ, ರಂಜಿತ್ ಹೊಸೊಕ್ಲು ಉಪಸ್ಥಿತರಿದ್ದರು. ಅಧ್ಯಕ್ಷ ಹರಿಪ್ರಸಾದ್ ರೈ ಸ್ವಾಗತಿಸಿ, ಕಾರ್ಯದರ್ಶಿ ನಾರಾಯಣ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here