ಸಾರಿಗೆ ರತ್ನ ಪ್ರಶಸ್ತಿಗೆ ಭಾಜನರಾದ ಪುತ್ತೂರು ಕ.ರಾ.ರ.ಸಾ ವಿಭಾಗದ ಸಹಾಯಕ ಲೆಕ್ಕಿಗ ನಿತೀಶ್‌ ನಾಯ್ಕ್‌

0

ಪುತ್ತೂರು: ಕಳೆದ 33 ವರ್ಷಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ಸಹಾಯಕ ಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿತೀಶ್‌ ನಾಯ್ಕ್ ಇವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಜ್ಯ ನೌಕರರ ಸಂಘದ ವತಿಯಿಂದ ಸಾರಿಗೆ ರತ್ನ ಪಶಸ್ತಿ ನೀಡಿ ಗೌರವಿಸಲಾಗಿದೆ. ಜು.25ರಂದು ಬೆಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪುತ್ತೂರು ಪಡೀಲ್‌ ಲೋಕಯ್ಯ ನಾಯ್ಕ್‌ ಮತ್ತು ಗೋಪಿ ದಂಪತಿಗಳ ಪುತ್ರರಾಗಿರುವ ಇವರ ಪತ್ನಿ ಪ್ರೇಮಲತಾ ಕೆ ಎಸ್‌ ಆರ್‌ ಟಿ ಸಿ ಯ ಹಾಸನ ವಿಭಾಗದಲ್ಲಿ ಅಂಕಿ ಅಂಶ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿ ಮೇಘನಾ ಎನ್ ಪಿ ಇವರು ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿದ್ದು, ಮತ್ತೋರ್ವ ಪುತ್ರಿ ಸಂಜನಾ ಎನ್ ಪಿ ಇವರು ಸಿ ಎ ವ್ಯಾಸಂಗ ಮಾಡುತಿದ್ದಾರೆ. ನಿತೀಶ್‌ ನಾಯ್ಕ್ ‌ಅವರ ಸಹೋದರ ಪದ್ಮನಾಭ ನಾಯ್ಕ್ ಪುತ್ತೂರು ನಗರ ಸಭೆಯ ಪಡೀಲ್ ವಾರ್ಡ್‌ ಸದಸ್ಯರಾಗಿರುತ್ತಾರೆ.

LEAVE A REPLY

Please enter your comment!
Please enter your name here