ಮೆಲ್ಲ ಮಾತನಾಡಿ ಎಂದಿದ್ದಕ್ಕೆ ಹಲ್ಲೆ ನಡೆಸಿ ದರೋಡೆ ಆರೋಪ – ಪ್ರಕರಣ ದಾಖಲು

0

ಪುತ್ತೂರು: ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದವರಲ್ಲಿ ಮೆಲ್ಲ ಮಾತನಾಡಿ ಎಂದಿದ್ದ ವ್ಯಕ್ತಿಗೆ ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆ ಮಂಜಲ್ಪಡ್ಪುವಿನ ನಡೆದಿದ್ದು, ಘಟನೆಗೆ ಸಂಬಂಧಿಸಿ ಹಲ್ಲೆ ನಡೆಸಿದವರ ವಿರುದ್ಧ ಹಲ್ಲೆ ಮತ್ತು ದರೋಡೆ ಪ್ರಕರಣ ದಾಖಲಾಗಿದೆ.
ಮಂಜಲ್ಪಡ್ಪು ನಿವಾಸಿ ಇರ್ಫಾನ್ ಎಂಬವರು ಹಲ್ಲೆಗೊಳಗಾಗಿದ್ದು, ಅವರು ಆ.2ರಂದು ಸ್ನೇಹಿತ ಅಲ್ತಾಫ್ ಎಂಬವರ ಜೊತೆ ಮಂಜಲ್ಪಡ್ಪುವಿನಲ್ಲಿ ಚಹಾ ಕುಡಿಯುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದ ನಾಲ್ವರು ಅಪರಿಚಿತರು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಆಗ ಇರ್ಪಾನ್ ಅವರು ಸ್ವಲ್ಪ ಮೆಲ್ಲ ಮಾತಾಡಿ ಎಂದು ಹೇಳಿದ್ದಕ್ಕೆ ಅಪರಿಚಿತರು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದಲ್ಲದೆ ಇರ್ಪಾನ್ ಅವರಲ್ಲಿದ್ದ ಐ ಪೋನ್ ಮೊಬೈಲ್ ಮತ್ತು ರೂ.78ಸಾವಿರ ನಗದನ್ನು ಕಿತ್ತುಕೊಂಡು ಹೋಗಿದ್ದಾರೆಂದು ಆರೋಪಿಸಲಾಗಿದೆ. ಇರ್ಫಾನ್ ಅವರ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here