ಬೊಳುವಾರು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಪೂಜೆ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಆಶಾಢ ಮಾಸ ಆಟಿ ತಿಂಗಳ ಪ್ರಯುಕ್ತ ಅ.16ರ ವರೆಗೆ ಶ್ರೀದೇವರಿಗೆ ಕಲ್ಪೋಕ್ಷ ಸಹಿತ ವಿಶೇಷ ದುರ್ಗಾಪೂಜೆ, ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ಕ್ಷೇತ್ರದ ಅರ್ಚಕರಾದ ವೆ.ಮೂ. ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ನಡೆಯುತ್ತಿದ್ದು, ಆ.08ರಂದು ರಾತ್ರಿ ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ನಡೆಯಿತು.

ಸಂಜೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಟ್ರಸ್ಟ್ (ರಿ.) ಪುತ್ತೂರು ಭಜನೆ, ಉಮೇಶ್ ದೇವಾಡಿಗರವರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ನಡೆದು ಪ್ರಸಾದ ವಿತರಣೆ, ಸಂಪದ ಟ್ರೇಡರ‍್ಸ್ ಪುತ್ತೂರುರವರಿಂದ ಅನ್ನಪ್ರಸಾದ ಭೋಜನ ನಡೆಯಿತು.

ಅ.8ರಂದು ಕ್ಷೇತ್ರದಲ್ಲಿ ಸುಜೀಂದ್ರ ಪ್ರಭುರವರಿಂದ ಸರ್ವಲಂಕಾರ ಸಹಿತ ವಿಶೇಷ ದುರ್ಗಾಪೂಜೆ, ಜಯಂತಿ ಹೆಗ್ಡೆ ಬೊಳುವಾರು, ಡಾ.ಉದಯಶಂಕರ್, ಜಯಶ್ರೀ ಬೆಟ್ಟಂಪಾಡಿ, ರಾಜೇಶ್ ಭಟ್, ಸಂಪದ ಟ್ರೇಡರ್ಸ್, ನವೀನ್ ಚಂದ್ರ,ಎಚ್ ಡಿಎಫ್ ಸಿ ಬ್ಯಾಂಕ್ ಪುತ್ತೂರು, ಕೊರಗಪ್ಪ ನಾಯಕ್, ವಿಜಯ ಶಾಮಿಯಾನದ ಮಹಾಬಲೇಶ್ವರ ಪ್ರಕಾಶ್, ಗಣೇಶ್ ಪೂಜಾರಿ ಮುರ, ಪ್ರಕಾಶ್ ನಾಯಕ್ (ಸೂರ್ಯಪ್ರಭ), ನಿತಿನ್ ಪಕ್ಕಳ, ಜಯಂತ ಮಹಾಲಕ್ಮೀ ಕೋಲ್ಡ್ ಹೌಸ್ ಪುತ್ತೂರುರವರಿಂದ ವಿಶೇಷ ದುರ್ಗಾಪೂಜೆ ಸೇವೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ವೆ.ಮೂ. ಶ್ರೀಧರ ಭಟ್ ಕಬಕ, ಅರ್ಚಕ ಶಂಕರ ನಾರಾಯಣ ಭಟ್, ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ವಿಶ್ವಸ್ಥ ಮಂಡಳಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶೆಟ್ಟಿ, ಕೋಶಾಧಿಕಾರಿ ಪ್ರಸನ್ನ ಬಳ್ಳಾಲ್, ವಿಶ್ವಸ್ಥ ಮಂಡಳಿ ಟ್ರಸ್ಟಿಗಳು, ಸದಸ್ಯರು, ಕ್ಷೇತ್ರ ಯುವಕ ವೃಂದದ ಸದಸ್ಯರು, ಕ್ಷೇತ್ರದ ಯಕ್ಷಕಲಾ ಪ್ರತಿಷ್ಠಾನದ ಸದಸ್ಯರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here