ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ಬಸ್ ಪಾಸ್ ವಿತರಣೆ

0

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ಇದರ ವತಿಯಿಂದ ಕರ್ನಾಟಕ ರಾಜ್ಯದಾದ್ಯಂತ ಪ್ರಯಾಣಿಸಲು ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಆ.11ರಂದು ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.


ಪುತ್ತೂರು ಕೆ.ಎಸ್.ಆರ್.ಟಿ.ಸಿ. ಪುತ್ತೂರು ಘಟಕದ ಸಿಬ್ಬಂದಿಗಳಾದ ವಿಠಲ.ಕೆ, ಮಹಾಲಕ್ಷ್ಮಿ, ನಾರಾಯಣ ನಾಯ್ಕ.ಬಿ. ಪಾಸು ವಿತರಣೆ ಮಾಡಿದರು. ಕಡಬ ಮತ್ತು ಪುತ್ತೂರು ತಾಲೂಕಿನ ಎಂಡೋಸಲ್ಫಾನ್ ಫಲಾನುಭವಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ಪಾಸ್ ಸೌಲಭ್ಯದ ಪ್ರಯೋಜನ ಪಡೆದರು. ವಿಕಲಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬ ತಾಲೂಕು ಪೆರಾಬೆ ಗ್ರಾ.ಪಂ ನ ಮುತ್ತಪ್ಪ.ಬಿ,ಆಲಂಕಾರು ಗ್ರಾ.ಪಂ ನ. ಮೋನಪ್ಪ.ಬಿ,ಕೊಯಿಲ ಗ್ರಾ.ಪಂನ ಅತಿಕಮ್ಮ, ರಾಮಕುಂಜ ಗ್ರಾ.ಪಂ ನ ಚೇತನಾ ಹಾಗೂ ಪುತ್ತೂರು ತಾಲೂಕು ಬಜತ್ತೂರು ಗ್ರಾ.ಪಂ ನ ಐಸಿಂತ ಪ್ರಜ್ವಲ್ ವೇಗಸ್ ರವರು ಬಸ್ ಪಾಸ್ ವಿತರಣೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here