ನೆಲ್ಯಾಡಿ-ಕೌಕ್ರಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ

0

ಅಧ್ಯಕ್ಷ-ವಿನೋದ್‌ಕುಮಾರ್, ಕಾರ್ಯದರ್ಶಿ-ಮೋಹನ್, ಉಪಾಧ್ಯಕ್ಷರು-ಸೋನಿತ್, ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ-ಮಂಜುನಾಥ ಗೌಡ, ಜೊತೆ ಕಾರ್ಯದರ್ಶಿ-ರಮೇಶ್ ಶೆಟ್ಟಿ
ನೆಲ್ಯಾಡಿ: ನೆಲ್ಯಾಡಿ-ಕೌಕ್ರಾಡಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿನೋದ್ ಕುಮಾರ್ ಬಾಕಿಜಾಲು, ಕಾರ್ಯದರ್ಶಿಯಾಗಿ ಮೋಹನ್ ಕಟ್ಟೆಮಜಲು, ಉಪಾಧ್ಯಕ್ಷರಾಗಿ ಸೋನಿತ್ ಹೊಸಮಜಲು, ಚಂದ್ರಶೇಖರ್ ಶೆಟ್ಟಿ ಗೋಳಿತ್ತೊಟ್ಟು, ಕೋಶಾಧಿಕಾರಿಯಾಗಿ ಮಂಜುನಾಥ ಗೌಡ ಹಾಗೂ ಜೊತೆ ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಬೀದಿಮನೆ ಆಯ್ಕೆಯಾಗಿದ್ದಾರೆ.

ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾ ಮಂದಿರದಲ್ಲಿ 40ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನವೀನ್ ಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಸದಸ್ಯರಾಗಿ ರವಿಪ್ರಸಾದ್ ಶೆಟ್ಟಿ, ಉದಯ ಕುಮಾರ್ ಗೌಡ, ಉಮೇಶ್ ಪೂಜಾರಿ, ರಮೇಶ್ ಬಾಣಜಾಲು, ಪ್ರಹ್ಲಾದ್ ಶೆಟ್ಟಿ, ಸುರೇಶ್ ಪಡಿಪಂಡ, ಸಂದೇಶ ಶೆಟ್ಟಿ, ರಾಜಶೇಖರ್, ಲೋಕೇಶ್, ಸುಮಂತ್ ಆಚಾರ್ಯ, ಭಾಸ್ಕರ್ ರೈ, ಅನಿಲ್ ರೈ, ದಿನೇಶ್ ನಾಯ್ಕ್, ರಘುನಾಥ್, ಹರೀಶ್, ಸುಧೀರ್ ಹೊಸಮಜಲು, ವಂದನ್, ಮೋಹನ್ ದೊಂತಿಲ, ಸಂತೋಷ್ ಆಟೋ, ರವಿಪ್ರಸಾದ್ ಗುತ್ತು, ಪ್ರಕಾಶ್ ಆಟೋ, ದೇಜಪ್ಪ ಆಟೋ ಅವರು ಆಯ್ಕೆಯಾದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್, ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್, ಕೋಶಾಧಿಕಾರಿ ಚಂದ್ರಶೇಖರ ಬಾಣಾಜಾಲು, ೪೦ನೇ ವರ್ಷದ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಮೋಹನ್, ಉಪಾಧ್ಯಕ್ಷ ಕೃಷ್ಣಪ್ಪ, ಕೋಶಾಧಿಕಾರಿ ದಯಾನಂದ, ಜೊತೆ ಕಾರ್ಯದರ್ಶಿ ರಕ್ಷಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here