ಕೆಮ್ಮಾಯಿ: ಬೈಕ್‌ಗೆ ಕಾರು ಡಿಕ್ಕಿ – ಹಿಟ್ ಆಂಡ್ ರನ್ ದೂರು

0

ಪುತ್ತೂರು:ಬನ್ನೂರು ಗ್ರಾ.ಪಂ ಕಚೇರಿಯ ಕೆಮ್ಮಾಯಿ ಬಳಿ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಆ.9 ರಂದು ನಡೆದಿದ್ದು, ಘಟನೆ ಕುರಿತು ಗಾಯಾಳು ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಕ್ ಸವಾರ ಬನ್ನೂರು ಗ್ರಾಮದ ಕುಂಟ್ಯಾನ ನಿವಾಸಿ ಸುಧಾಕರ(53ವ) ಎಂಬವರು ಗಾಯಗೊಂಡಿದ್ದಾರೆ. ಅವರು ಆ.9ರಂದು ಸಂಜೆ ಸೇಡಿಯಾಪು ಕಡೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕೆಮ್ಮಾಯಿ ಬಳಿ ಬೈಕ್‌ನ ಎದುರಿನಿಂದ ಹೋಗುತ್ತಿದ್ದ ಕಾರು ಯಾವುದೇ ಸೂಚನೆ ನೀಡದೆ ಹಿಮ್ಮುಖವಾಗಿ ಚಲಿಸಿ ಬೈಕ್‌ಗೆ ಡಿಕ್ಕಿಯಾಗಿ ಪರಾರಿಯಾಗಿದೆ. ಅಪಘಾತದಿಂದ ಗಾಯಗೊಂಡಿರುವ ಸುಧಾಕರ್ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಪಘಾತಕ್ಕೆ ಪೂರಕವಾದ ದೂರು ದಾಖಲಾಗಿದ್ದರಿಂದ ಎರಡು ದೂರಿನ ಆಧಾರದಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನ್ಯಾಯಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಪೊಲೀಸ್ ಠಾಣೆಯಿಂದ ಗಾಯಾಳು ಸುಧಾಕರ್ ಅವರಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here