ದೆಹಲಿ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಲು ಮಾಸ್ಟರ್ ಪ್ಲಾನರಿಯ ಇಬ್ಬರು ಸಿಬ್ಬಂದಿಗೆ ಆಹ್ವಾನ

0

ಪುತ್ತೂರು: ಆಗಸ್ಟ್ 15ರಂದು ನವದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಪುತ್ತೂರಿನ ನೆಹರುನಗರದ ಮಾಸ್ಟರ್ ಪ್ಲಾನರಿಯ ಇಬ್ಬರು ಮೇಸ್ತ್ರಿಗಳಿಗೆ ಆಹ್ವಾನ ದೊರಕಿದೆ.
ಕರ್ನಾಟಕದಿಂದ ಒಟ್ಟು ಮೂರು ಮಂದಿ ಈ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಇದರಲ್ಲಿ ಇಬ್ಬರು ಮಾಸ್ಟರ್ ಪ್ಲಾನರಿಯ ಮೇಸ್ತ್ರಿಗಳು. ಕಳೆದ 24 ವರ್ಷಗಳಿಂದ ಮಾಸ್ಟರ್ ಪ್ಲಾನರಿಯಲ್ಲಿ ಮೇಸ್ತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಜನಾರ್ದನ್ ನಾಯಕ್ ಹಾಗೂ ಕಳೆದ 22 ವರ್ಷಗಳಿಂದ ಮೇಸ್ತ್ರಿಯಾಗಿ ಕೆಲಸ ನಿರ್ವಹಿಸುತ್ತಿರುವ ಸದಾಶಿವ ರಾಷ್ಟ್ರ ರಾಜಧಾನಿಯ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

LEAVE A REPLY

Please enter your comment!
Please enter your name here