ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯದ ಧ್ವಜಾರೋಹಣ ಕಾರ್ಯಕ್ರಮ ಪಕ್ಷದ ಕಛೇರಿಯಲ್ಲಿ ನಡೆಯಿತು.


ಅಸೆಂಬ್ಲಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ರವರು ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಮತ್ತು ಸಂವಿಧಾನವನ್ನು ಉಳಿಸುವ ಪ್ರತಿಜ್ಞೆಯನ್ನು ಇಂದು ನಾವು ಮಾಡಬೇಕಾಗಿದೆ ಎಂದರು. ನಂತರ ಸಂದೇಶ ಬಾಷಣ ಮಾಡಿದ ಅಸೆಂಬ್ಲಿ ಉಪಾಧ್ಯಕ್ಷ ಅಬ್ದುಲ್‌ ಹಮೀದ್ ಸಾಲ್ಮರ ಮಾತನಾಡಿ ಯಾವುದೇ ಬೆಲೆತೆತ್ತಾದರೂ ಈ ತಿವರ್ಣ ಧ್ವಜಗಳು ಸೂಚಿಸುವ ತ್ಯಾಗ, ಶಾಂತಿ ಮತ್ತು ಪ್ರಗತಿಯನ್ನು ಸಾರುವ ಈ ಸಂಕೇತವನ್ನು ಉಳಿಸಿಕೊಳ್ಳಲು ಸರ್ವರೂ ಶ್ರಮಿಸಬೇಕೆಂದು ಕರೆ ನೀಡಿದರು. ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ ಮತ್ತು ಅಬೂಬಕ್ಕರ್ ಸಿದ್ದೀಕ್ ಕೆ.ಎ‌, ಯಹಿಯಾ ಕೂರ್ನಡ್ಕ, pbk ಮಹಮ್ಮದ್ ಮತ್ತು ಗ್ರಾ.ಪಂ ಸದಸ್ಯರಾದ ಸಿದ್ದೀಕ್ ಉರಿಮಜಲ್ ‌ವಿವಿದ ಬ್ಲಾಕ್ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಅಸೆಂಬ್ಲಿ ಪ್ರ.ಕಾರ್ಯದರ್ಶಿ ‌ರಹೀಂ ಪುತ್ತೂರು ಸ್ವಾಗತಿಸಿದರು.
ಕಾರ್ಯಕ್ರಮ ‌ನಿರ್ವಹಿಸಿದ ಉಸ್ಮಾನ್ ಪೇರಮುಗೇರು ವಂದನಾರ್ಪನೆ ನೆರವೇರಿಸಿದರು.

LEAVE A REPLY

Please enter your comment!
Please enter your name here