ಕೆದಂಬಾಡಿ ಗ್ರಾಪಂ-ಅಧ್ಯಕ್ಷರಾಗಿ ಸುಜಾತ ಮುಳಿಗದ್ದೆ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ಬಲ್ಲಾಳ್ ಬೀಡು ಅವಿರೋಧ ಆಯ್ಕೆ

0

ಪುತ್ತೂರು :ಕೆದಂಬಾಡಿ ಗ್ರಾಮ ಪಂಚಾಯಿತ್ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸುಜಾತಾ ಮುಳಿಗದ್ದೆ ಹಾಗೂ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ಬಲ್ಲಾಳ್ ಕೆದಂಬಾಡಿ ಬೀಡು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತ್ ಒಟ್ಟು 10 ಸದಸ್ಯ ಬಲವನ್ನು ಹೊಂದಿದ್ದು ಇದರಲ್ಲಿ 7 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 2 ಕಾಂಗ್ರೆಸ್ ಬೆಂಬಲಿತ ಮತ್ತು 1 ಪಕ್ಷೇತರ ಸದಸ್ಯ ಬಲವನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟಗೊಂಡಿತು ಅದರಂತೆ ಆ. 18ರಂದು ಚುನಾವಣೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಸುಜಾತಾ ಮುಳಿಗದ್ದೆ ಹಾಗೂ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ಬಲ್ಲಾಳ್ ಕೆದಂಬಾಡಿಬೀಡು ಆಯ್ಕೆಯಾಗಿದ್ದಾರೆಂದು, ಚುನಾವಣಾ ಅಧಿಕಾರಿ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ, ರೇಖಾ ಎ ರವರು ಘೋಷಣೆ ಮಾಡಿದರು. 

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿಕೆ ಸಹಕರಿಸಿದ್ದರು.ಈ ಸಂದರ್ಭದಲ್ಲಿ ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ರತನ್ ರೈ ಕುಂಬ್ರ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂ ಪಾಡಿ ಹಾಗೂ ಸದಸ್ಯರುಗಳಾದ ವಿಠಲ ರೈ ಮಿತ್ರಂಪಾಡಿ, ಕೃಷ್ಣಕುಮಾರ್ ಇದ್ಯಪೆ, ರೇವತಿ ಬೋಳೋಡಿ, ಪ್ರವೀಣ್ ಶೆಟ್ಟಿ ತಿಂಗಳಾಡಿ,ಸುಜಾತ ಹಾಗೂ ಅಸ್ಮಾ ಗಟ್ಟ ಮನೆ ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿಗಳು ಸಹಕರಿಸಿದರು

LEAVE A REPLY

Please enter your comment!
Please enter your name here