ಶಾರದೋತ್ಸವ ಸಮಿತಿ ಶಾರದ ನಗರದ ಅಧ್ಯಕ್ಷರಾಗಿ ವಾಸುದೇವ ಕುಲಾಲ್, ಕಾರ್ಯದರ್ಶಿಯಾಗಿ ಆದರ್ಶ್ ಶಾರದನಗರ ಆಯ್ಕೆ

0
This image has an empty alt attribute; its file name is 654654.jpg

This image has an empty alt attribute; its file name is 654654.jpg

ಆಲಂಕಾರು: ರಾಮಕುಂಜ ಗ್ರಾಮದ ಶಾರದನಗರ ಭಜನಾ ಮಂದಿರದ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ವಾಸುದೇವ ಕುಲಾಲ್, ಕಾರ್ಯದರ್ಶಿ ಯಾಗಿ ಆದರ್ಶ್ ಶಾರದನಗರ ಆಯ್ಕೆಯಾಗಿದ್ದಾರೆ.
2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಶ್ರೀ ಶಾರದಾಂಬ ಭಜನಾ ಮಂದಿರ ಶಾರದಾ ನಗರದಲ್ಲಿ ಪ್ರದೀಪ್ ಬಾಂತೊಟ್ಟು ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಹಿಂದಿನ ಸಾಲಿನ ವಾರ್ಷಿಕ ಕಾರ್ಯವರದಿ, ಲೆಕ್ಕಪತ್ರ ಮಂಡನೆ ಹಾಗೂ ಪ್ರಸ್ತುತ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಾಸುದೇವ ಕುಲಾಲ್, ಕಾರ್ಯದರ್ಶಿಯಾಗಿ ಆದರ್ಶ್ ಶಾರದಾನಗರ , ಉಪಾಧ್ಯಕ್ಷರಾಗಿ ಹರೀಶ್ ದರ್ಖಾಸು ರಾಮಕುಂಜ, ಶೇಖರ ಕಟ್ಟಪುಣಿ, ಅಶೋಕ ಕೊಯಿಲ, ಲಕ್ಷ್ಮೀನಾರಾಯಣ ರಾವ್ ಅತೂರು, ಕೋಶಾಧಿಕಾರಿಯಾಗಿ ಜಯಪ್ರಕಾಶ್ ಅಮೈ, ಜೂತೆ ಕಾರ್ಯದರ್ಶಿಯಾಗಿ, ಕ್ರೀಡಾ ಕಾರ್ಯದರ್ಶಿಯಾಗಿ ವಿಜಯ್ ಬರಮೆಲು, ಯತೀಶ್ ಬರಮೇಲು, ಭಜನಾ ಕಾರ್ಯದರ್ಶಿಯಾಗಿ ಸುರೇಶ್ ಇರ್ಕಿ, ಗೌರವಾಧ್ಯಕ್ಷರಾಗಿ ಪ್ರದೀಪ್ ಬಾಂತೊಟ್ಟು ಹಾಗೂ ಗೌರವ ಸಲಹೆಗಾರರಾಗಿ ಗಣರಾಜ ಕುಂಬ್ಳೆ, ವೆಂಕಟೇಶ್ವರ ಭಟ್, ರಮೇಶ್ ಎನ್ ಸಿ ತಾವೂರು, ಎ.ಎನ್. ಕೊಳಂಬೆಯವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here