ಪುತ್ತೂರಿನಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ಇಲ್ಲಿನ ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶನಿವಾರದ ಪ್ರಯುಕ್ತ ಸೆ.2 ರಂದು ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಪವನ್ ಕಿರಣ್ಕೆರೆ ವಿರಚಿತ, “ಶ್ರೀ ಕೃಷ್ಣ ತುಲಾಭಾರ” ಎನ್ನುವ ಆಖ್ಯಾನದ ತಾಳಮದ್ದಳೆ ಜರುಗಿತು.

ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಕು| ಸಿಂಚನಾ ಮೂಡುಕೋಡಿ, ಕು| ಕೃತಿಕಾ ಖಂಡೇರಿ, ಚೆಂಡೆ – ಮದ್ದಲೆಯಲ್ಲಿ ಟಿ. ಡಿ. ಗೋಪಾಲಕೃಷ್ಣ ಭಟ್, ಮಾ| ಅದ್ವೈತ್ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣನಾಗಿ ಪದ್ಮಾ ಕೆ ಆರ್ ಆಚಾರ್ಯ,ನಾರದನಾಗಿ ಜಯಲಕ್ಷ್ಮಿ ವಿ ಭಟ್, ಸತ್ಯಭಾಮೆಯಾಗಿ ಪ್ರೇಮಾ ಕಿಶೋರ್, ರುಕ್ಮಿಣಿಯಾಗಿ ಶ್ರೀವಿದ್ಯಾ ಜೆ ರಾವ್ ,ಬಲರಾಮನಾಗಿ ಶೃತಿ ವಿಸ್ಮಿತ್ ಪಾತ್ರ ನಿರ್ವಹಣೆ ಮಾಡಿದರು. ದೇವಳದ ವತಿಯಿಂದ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here