ಪೆರಿಯಡ್ಕ ಮುಹಿಯುದ್ದೀನ್ ಜುಮಾ ಮಸೀದಿ: ಅಧ್ಯಕ್ಷರಾಗಿ 7ನೇ ಬಾರಿಗೆ ಕೆ.ಪಿ ಬಶೀರ್ ಆಯ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಯು.ಪಿ ಅಝೀಝ್ ಪೆರಿಯಡ್ಕ

0

ಉಪ್ಪಿನಂಗಡಿ: ಮುಹಿಯುದ್ದೀನ್ ಜುಮಾ ಮಸೀದಿ ಪೆರಿಯಡ್ಕ ಇದರ ಅಧ್ಯಕ್ಷರಾಗಿ ಸತತ 7ನೇ ಬಾರಿಗೆ ಕೆ.ಪಿ ಬಶೀರ್ ಆಯ್ಕೆಗೊಂಡಿದ್ದಾರೆ. ಪ್ರಧಾನಕಾರ್ಯದರ್ಶಿಯಾಗಿ ಯು.ಪಿ ಅಝೀಝ್ ಪೆರಿಯಡ್ಕ ಆಯ್ಕೆಯಾಗಿದ್ದಾರೆ.
ಮುಹಿಯುದ್ದೀನ್ ಜುಮಾ ಮಸೀದಿ ಪೆರಿಯಡ್ಕ ಇದರ ಮಹಾ ಸಭೆಯು ಸೆ.03ರಂದು ಆದಿತ್ಯವಾರ ಬಹು|ಸಯ್ಯದ್ ಶರಫುಧ್ಧೀನ್ ತಂಙಳ್ ಸಾಲ್ಮರ ಹಾಗೂ ಕಮೀಟಿ ಗೌರವಾಧ್ಯಕ್ಷರಾದ ಎಮ್. ಬಿ ನಝೀರ್ ಇವರ ನೇತೃತ್ವದಲ್ಲಿ 2023-24 ನೇ ಸಾಲಿನ ನೂತನ ಕಮಿಟಿ ರಚಿಸಲಾಯಿತು.
ಆಡಳಿತ ಸಮಿತಿ ಉಪಾಧ್ಯಕ್ಷರುಗಳಾಗಿ ಮಹಮ್ಮದ್ ಹನೀಫ್, ಹಾಜಿ ಅಬ್ದುಲ್ಲ ಟೈಲರ್, ಜೊತೆ ಕಾರ್ಯದರ್ಶಿ ಬಿ.ಕೆ ಅಬ್ದುಲ್ ರಹಿಮಾನ್, ಮೈಸಿದಿ ಇಬ್ರಾಹೀಂ, ಖಜಾಂಚಿಯಾಗಿ ಪಿ‌.ವಿ ಬಶೀರ್ ಹಾಜಿ ಹಾಗೂ ಸದಸ್ಯರುಗಳಾಗಿ ಹನೀಫ್ ಎಚ್.ಎಸ್.ಎ, ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ಖಾದರ್ ಹಾಜಿ, ಯು.ಕೆ ಇಕ್ಬಾಲ್, ಪಿ.ಎಚ್ ಮುಸ್ತಫ, ಉಮ್ಮರ್ ಕಿಸ್ವಾ, ಶರೀಫ್ ಕಾಂಟ್ರಾಕ್ಟರ್, ಬಿ.ಎಮ್ ಬಶೀರ್, ಇಸಾಕ್, ಹಾರೂನ್ ಇವರನ್ನು ನೇಮಕ ಮಾಡಲಾಯಿತು. ಬಹು|ಶರಫುಧ್ಧೀನ್ ತಂಙಲ್‌ ಸಾಲ್ಮರ ನೂತನ ಪಧಾದಿಕಾರಿಗಳಿಗೆ ಶುಭಹಾರೈಸಿದರು.
ನಿಕಟಪೂರ್ವ ಕಾರ್ಯದರ್ಶಿ ಬಿ.ಎಮ್ ಬಶೀರ್ ವರದಿ ಮಂಡಿಸಿದರು. ಇಸ್ಮಾಯಿಲ್ ಮುಸ್ಲಿಯಾರ್ ಸ್ಷಾಗತ ಭಾಷಣ ಮಾಡಿದರು. ಮಹಮ್ಮದ್ ಹನೀಫ್ ವಂದಿಸಿದರು.

LEAVE A REPLY

Please enter your comment!
Please enter your name here