ವೀರಮಂಗಲ: ಆಕಸ್ಮಿಕ ಬೆಂಕಿ-ಕೊಟ್ಟಿಗೆ ಭಸ್ಮ

0

ಪುತ್ತೂರು: ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಸೆ.5ರಂದು ಮುಂಜಾನೆ ವೀರಮಂಗಲದಲ್ಲಿ ನಡೆದಿದೆ. ವೀರಮಂಗಲ ಪರಂದೋಡಿ ನಿವಾಸಿ ಸುಲೈಮಾನ್ ಅವರ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಕೊಟ್ಟಿಗೆಯಲ್ಲಿದ್ದ ಅಡಿಕೆ, ಕಟ್ಟಿಗೆ ಮತ್ತಿತರ ವಸ್ತುಗಳು ಸುಟ್ಟು ಹೋಗಿದ್ದು ಕೊಟ್ಟಿಗೆಯ ಶೀಟ್‌ಗೆ ಬೆಂಕಿ ಹೊತ್ತಿಕೊಂಡ ಕಾರಣ ಕೊಟ್ಟಿಗೆ ಭಾಗಶಃ ಸುಟ್ಟು ಭಸ್ಮವಾಗಿದೆ.

ಸ್ಥಳೀಯರಾದ ಫಾರೂಕ್ ಆನಾಜೆ, ರಶೀದ್ ಪರಂದೋಡಿ, ರಫೀಕ್ ಪರಂದೋಡಿ, ಆಶಿಕ್ ಪಳ್ಳತ್ತೋಡಿ ಮತ್ತಿತರರು ಬೆಂಕಿ ನಂದಿಸಲು ಸಹಕಾರ ನೀಡಿದರು. ಘಟನೆಯಿಂದ ರೂ.40 ಸಾವಿರ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here