ಬಿಳಿನೆಲೆ ಗ್ರಾ.ಪಂನಲ್ಲಿ ಸಮುದಾಯದತ್ತ ಸಾಂತ್ವನ, ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ

0

ಕಡಬ: ಜನಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಪತ್ತೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತ್ ಬಿಳಿನೆಲೆ, ನಂದ ಗೋಕುಲ ಸ್ವಸಹಾಯ ಸಂಘು ಇವುಗಳ ಸಹಯೋಗದಲ್ಲಿ ಸಮುದಾಯದತ್ತ ಸಾಂತ್ವನ ಸಮಾಲೋಚನೆ ಮತ್ತು ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಸೆ.8ರಂದು ಬಿಳಿನೆಲೆ ಗ್ರಾ.ಪಂ ವಿಕಾಸ ಸಭಾಭವನದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ಶಾರದಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು.


ಸಾಂತ್ವನ ಕೇಂದ್ರ ಪುತ್ತೂರು ಇದರ ಪ್ರಭಾರ ಆಪ್ತ ಸಮಾಲೋಚಕಿ ಅಶ್ವಿನಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸದಸ್ಯರಾದ ಚಂದ್ರಾವತಿ, ಸತೀಶ್ ಕೆ, ಸುಗ್ರಾಮ ಪುತ್ತೂರು ಇದರ ಸಂಯೋಜಕಿ ಕು.ಕಾವೇರಿ,ಸಾಂತನ ಸಮಾಜ ಕಾರ್ಯಕರ್ತರಾದ ಕು.ರೇಖಾ ನಿತಿನ್ ಕುಮಾರ್, ಸಂಜಿವಿನಿ ಒಕ್ಕೂಟದ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷೆ ಭವ್ಯ, ಹಾಗೂ ಸದಸ್ಯರುಗಳು, ಡಿ.ಕೆ.ಆರ್.ಡಿ.ಎಸ್ ಸ್ವಸಹಾಯ ಸಂಘದ ಸುಶೀಲ, ಆರೋಗ್ಯ ಇಲಾಖೆಯ ಸಿ.ಹೆಚ್.ಒ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಗ್ರಾ.ಪಂ ಪಿಡಿಒ ಶೀನ ಎ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here