ಎಪಿಎಂಸಿ ಮಜೀದ್ ಮಸ್ಜಿದ್ ಸಮಿತಿ ಸಾಲ್ಮರ ಅಧ್ಯಕ್ಷರಾಗಿ ಸಿರಾಜುದ್ದೀನ್ ಸಾಲ್ಮರ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಕಬೀರ್ ಸಾಲ್ಮರ ಆಯ್ಕೆ

0

ಪುತ್ತೂರು: ಇಲ್ಲಿನ ಎಪಿಎಂಸಿ ಮಜೀದ್ ಮಸ್ಜಿದ್ ಸಮಿತಿ ಸಾಲ್ಮರ, ಇದರ ನೂತನ ಅಧ್ಯಕ್ಷರಾಗಿ ಸಿರಾಜುದ್ದೀನ್ ಸಾಲ್ಮರ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಉದ್ಯಮಿ ಕಬೀರ್ ಸಾಲ್ಮರ ರವರನ್ನು ಸೆ.9ರಂದು ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ಹಾಜಿ ಯೂ ಅಬ್ದುಲ್ಲಾ, ಉಪಾಧ್ಯಕ್ಷರಾಗಿ ಅಶ್ರಫ್ ಗಾರ್ಬಲ್, ಕೋಶಾಧಿಕಾರಿಗಳಾಗಿ ಅಬ್ದುಲ್ ರಹೀಮ್ ರಾಹಿಲ್, ಜೊತೆ ಕಾರ್ಯದರ್ಶಿಗಳಾಗಿ ಬದುರುದ್ದೀನ್ ಸಾಲ್ಮರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಉಮ್ಮರ್ ಫೈಜಿ ಸಾಲ್ಮರ, ಹಂಝಾ ಕೆ ಎಂ, ಬಶೀರ್ ಸಾಲ್ಮರ ಆಯ್ಕೆಗೊಂಡರು.

ಅನ್ಸಾರುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷರಾದ ಎಲ್ ಟಿ ಅಬ್ದುಲ್ ರಜಾಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಅನ್ಸಾರುದ್ದೀನ್ ಜಮಾತ್ ಕಮಿಟಿ ಪ್ರಧಾನ ಕಾರ್ಯದರ್ಶಿಗಳಾದ ಯಾಕುಬ್ ಖಾನ್ ಸಹಕರಿಸಿದರು. ನೂರುದ್ದೀನ್ ಸಾಲ್ಮರ ನೂತನ ಸಮಿತಿಗೆ ಶುಭ ಹಾರೈಸಿದರು. ನೌಫಲ್ ಸಾಲ್ಮರ ಸ್ವಾಗತಿಸಿ, ವರದಿಯನ್ನು ಮಂಡಿಸಿದರು.

LEAVE A REPLY

Please enter your comment!
Please enter your name here