ಪುತ್ತೂರು ನಗರ ಠಾಣಾ ಪಿಎಸ್‌ಐ ಆಗಿ ಆಂಜನೇಯ ರೆಡ್ಡಿ

0

ಪುತ್ತೂರು: ಪುತ್ತೂರು ನಗರ ಠಾಣಾ ಪಿಎಸ್‌ಐ ಆಗಿ ಆಂಜನೇಯ ರೆಡ್ಡಿ ನೇಮಕಗೊಂಡಿದ್ದಾರೆ. ಈ ಹಿಂದೆ ಪಿಎಸ್‌ಐ ಆಗಿ ಕರ್ತವ್ಯದಲ್ಲಿದ್ದ ಶ್ರೀಕಾಂತ್ ರಾಥೋಡ್ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಆಂಜನೇಯ ರೆಡ್ಡಿಯವರನ್ನು ನೇಮಕ ಮಾಡಲಾಗಿದೆ.

ಆಂಜನೇಯ ರೆಡ್ಡಿ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಎಸೈ ಆಗಿದ್ದು, ಬಳಿಕ ಎಸೈ ಆಗಿದ್ದ ಡಿ.ಎನ್.ಈರಯ್ಯ ಅವರ ವರ್ಗಾವಣೆಯ ಬಳಿಕ ಅದೇ ಠಾಣೆಗೆ ಎಸೈ ಆಗಿ ಆಂಜನೇಯ ರೆಡ್ಡಿ ನಿಯುಕ್ತಿಯಾಗಿದ್ದರು. ಬಳಿಕ ಅವರಿಗೆ ಕಡಬ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಕಡಬದಲ್ಲಿದ್ದ ರುಕ್ಮ ನಾಯ್ಕ್ ಅವರು ಬೆಳ್ಳಾರೆ ಠಾಣೆಗೆ ವರ್ಗಾವಣೆಯಾದರು. ಇದೀಗ ಆಂಜನೇಯ ರೆಡ್ಡಿ ಅವರು ಕಡಬ ಠಾಣೆಯಿಂದ ಪುತ್ತೂರು ನಗರ ಠಾಣೆಗೆ ವರ್ಗಾವಣೆಯಾಗಿದ್ದಾರೆ.

LEAVE A REPLY

Please enter your comment!
Please enter your name here