ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 8ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ-ನೂತನ ಸಮಿತಿ ಆಯ್ಕೆ

0

ಪುತ್ತೂರು: ಕುರಿಯ ಗ್ರಾಮದ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನ.4 ರಂದು ನಡೆಯುವ 8ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಗೆ ಗೌರವಧ್ಯಕ್ಷ ರೇಖನಾಥ್ ರೈ ಸಂಪ್ಯದಮೂಲೆ ಇವರ ನೇತ್ರತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಯಶವಂತ ನಾಯಕ್ ಪೆರಾಜೆ, ಉಪಾಧ್ಯಕ್ಷರುಗಳಾಗಿ ಜ್ಯೋತಿ ರಮೇಶ ಅಂಗಿಂತಾಯ, ಶ್ವೇತಾ ರೈ,ಶ್ರೀ ವಿಶ್ವನಾಥ್ ನಾಯ್ಕ್, ಅಮ್ಮುoಜ, ಕಾರ್ಯದರ್ಶಿ ಯಾಗಿ ಬ್ರಿಜೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಈಶ್ವರ ಗೌಡ ನೆಕ್ಕರೆ, ಕೋಶಧಿಕಾರಿಯಾಗಿ ರಾಘವೇಂದ್ರ ಅಂಗಿಂತಾಯ, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ್ ಗೌಡ ಡೆಮ್ಮಲೆ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿ ಯ ಅಧ್ಯಕ್ಷರಾದ ರಾಮಣ್ಣ ನಾಯ್ಕ, ಅಮ್ಮುoಜ, ಸದಸ್ಯರಾದ ಸಂತೋಷ್ ರೈ, ರೇಖನಾಥ್ ರೈ, ಸಂಪ್ಯದಮೂಲೆ, ಮಾಲಿನಿ ಹೆಗ್ಡೆ ಹಾಗೂ ಭಗವದ್ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here