ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ-ವೈಭವದ ಶೋಭಾಯಾತ್ರೆ ,ಕಣ್ತುಂಬಿಕೊಂಡ ಸಾವಿರಾರು ಭಕ್ತರು

0

ಸವಣೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವೈಭವದ ಶೋಭಾಯಾತ್ರೆ ಮೂಲಕ ಸಾಗಿ ಗೌರಿಹೊಳೆಯಲ್ಲಿ ಗಣಪತಿ ವಿಗ್ರಹದ ಜಲಸ್ತಂಬನ ಮಾಡುವ ಮೂಲಕ ಸಂಪನ್ನಗೊಂಡಿತು.ದೇವಸ್ಥಾನದ ತಂತ್ರಿ ಕೆಮ್ಮಿಂಜೆ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ಮಾರ್ಗದರ್ಶನದಲ್ಲಿ ದೇವಸ್ಥಾನದ ಅರ್ಚಕ ಶ್ರೀರಾಮ ಕಲ್ಲೂರಾಯ ಅವರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ,ಸಭಾ ಕಾರ್ಯದ ಬಳಿಕ ಶ್ರೀಗಣಪತಿ ದೇವರ ವೈಭವದ ಶೋಭಾಯಾತ್ರೆ ಆರಂಭಗೊಂಡಿತು.

ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯಲ್ಲಿ ಮಕ್ಕಳ ಕುಣಿತ ಭಜನೆ, ಗೊಂಬೆ ಕುಣಿತ, ಸಿಂಹ ವೇಷ, ಹುಲಿ-ಕುಣಿತ , ಟ್ಯಾಬ್ಲೋ ಹಾಗೂ ನಾದಸ್ವರ ವಾದನ ,ಭಕ್ತಿ ಸಂಗೀತಕ್ಕೆ ಹೆಜ್ಜೆ ಹಾಕಿದ ಸಾವಿರಾರು ಭಕ್ತರು ಗಣೇಶೋತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು.ಸರ್ವೆ ಗೌರಿಹೊಳೆಯಲ್ಲಿ ವಿಗ್ರಹದ ಜಲಸ್ತಂಬನವರೆಗೆ ಶೋಭಾಯಾತ್ರೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಸಾದ್‌ ರೈ ಸೊರಕೆ , ಶ್ರೀಗಣೇಶೋತ್ಸವ ಸಮಿತಿಯ ಸಮಿತಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು ,ಅಧ್ಯಕ್ಷ ವಿನಯ ಕುಮಾರ್‌ ರೈ ಸರ್ವೆ ,ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಗೌಡ ತಂಬುತ್ತಡ್ಕ,ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿಶ್ವನಾಥ ರೈ ಮೇಗಿನಗುತ್ತು ಬಾವ,ಬೆಳಿಯಪ್ಪ ಗೌಡ ತಂಬುತ್ತಡ್ಕ,ರಾಧಾಕೃಷ್ಣ ರೈ ರೆಂಜಲಾಡಿ,ಪ್ರವೀಣ ರೈ ಮೇಗಿನಗುತ್ತು,ಜಯಂತಿ ನಾಯ್ಕ ನೆಕ್ಕಿತಡ್ಕ ,ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಭಂಡಾರಿ ಸೊರಕೆ,ಶಶಿಧರ್‌ ಎಸ್.ಡಿ.ಸರ್ವೆದೋಳಗುತ್ತು,ಗೌರವ ಸಂಚಾಲಕರಾದ ಆನಂದ ಪೂಜಾರಿ ಸರ್ವೆದೋಳಗುತ್ತು,ವಿಜಯ ಕುಮಾರ್‌ ರೈ ಮೊದಲಾದವರಿದ್ದರು.

ಸಹಕರಿಸಿದ ಮಹಾಜನತೆಗೆ ನಮೋ ನಮಃ
ಸರ್ವೆಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆದ ಪ್ರಥಮ ವರ್ಷದ ಗಣೇಶೋತ್ಸವ ಯಶಸ್ವಿಯಾಗಿದೆ.ನಮ್ಮ ನಿರೀಕ್ಷೆಗೂ ಮೀರಿ ಭಕ್ತಾದಿಗಳು ಸಹಕರಿಸಿದ್ದಾರೆ,ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದಾರೆ.ವಿವಿಧ ಸಮಿತಿಗಳ ಸದಸ್ಯರು, ಸಂಚಾಲಕರು,ಪದಾಧಿಕಾರಿಗಳು ಅಚ್ಚುಕಟ್ಟಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.ಈ ಕಾರ್ಯದಲ್ಲಿ ಸಹಕರಿಸಿದ ಮಹಾಜನತೆಗೆ ನಮೋ ನಮಃ
-ಶಿವನಾಥ ರೈ ಮೇಗಿನಗುತ್ತು ,ಸಂಚಾಲಕರು ಶ್ರೀಗಣೇಶೋತ್ಸವ ಸಮಿತಿ ಸರ್ವೆ

ಶ್ರೀದೇವರ ಅನುಗ್ರಹ ,ಭಕ್ತರ ಸಹಕಾರ
ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ,ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮಗಳೆಲ್ಲವೂ ನಮ್ಮ ನಿರೀಕ್ಷೆಗಿಂತಲೂ ಹೆಚ್ಚು ಭಕ್ತರ ಪಾಲ್ಗೊಳ್ಳುವಿಕೆ ಹಾಗೂ ಸಹಕಾರದಿಂದ ಯಶಸ್ವಿಯಾಗಿದೆ.ಇದೀಗ ಪ್ರಥಮ ವರ್ಷದ ಶ್ರೀಗಣೇಶೋತ್ಸವವು ದೇವರ ಅನುಗ್ರಹ , ಭಕ್ತರ ಸಹಕಾರದಿಂದ ಯಶಸ್ವಿಯಾಗಿದೆ.
-ಪ್ರಸಾದ್‌ ರೈ ಸೊರಕೆ, ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀಕ್ಷೇತ್ರ ಸರ್ವೆ

ಹಿರಿಯರ ಮಾರ್ಗದರ್ಶನ ,ಯುವ ಪಡೆಯ ಉತ್ಸಾಹ
ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವರ ಅನುಗ್ರಹದಿಂದ ಪ್ರಥಮ ವರ್ಷದ ಗಣೇಶೋತ್ಸವವು ಯಶಸ್ವಿಯಾಗಿದೆ.ಶ್ರೀದೇವರ ಪೂರ್ಣಾನುಗ್ರಹ ಭಕ್ತರಿಗೆ ಇದೆ ಎಂಬುದಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಜನರೇ ಸಾಕ್ಷಿ. ಹಿರಿಯರ ಮಾರ್ಗದರ್ಶನ ,ಯುವಪಡೆಯ ಉತ್ಸಾಹದಿಂದ ಯಶಸ್ವಿಯಾಗಿದೆ.
-ವಿನಯ ಕುಮಾರ್‌ ರೈ ಸರ್ವೆ, ಅಧ್ಯಕ್ಷರು ಶ್ರೀಗಣೇಶೋತ್ಸವ ಸಮಿತಿ

LEAVE A REPLY

Please enter your comment!
Please enter your name here