ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ಮಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

0

ಕೆ ಎಫ್ ಡಿ ಸಿ ಕಾರ್ಮಿಕರ ಬೋನಸ್ ಬಿಡುಗಡೆ ಕುರಿತು ಚರ್ಚೆ

ಕಾಣಿಯೂರು: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿನ ಅರಣ್ಯ ವಿಭಾಗದ ಕಾರ್ಮಿಕರಿಗೆ 2021-22ನೇ ಸಾಲಿನ ಬೋನಸ್ ಬಿಡುಗಡೆ ಮಾಡುವ ಬಗ್ಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಶುಕ್ರವಾರ ಸಚಿವರಾದ ಈಶ್ವರ ಬಿ ಖಂಡ್ರೆ ಅವರ ಬೆಂಗಳೂರು ವಿಕಾಸ ಸೌಧದ ಕಛೇರಿಗೆ ಭೇಟಿ ನೀಡಿ ಅರಣ್ಯ ನಿಗಮದಲ್ಲಿ ರಬ್ಬರ್ ಕಾರ್ಮಿಕರಾಗಿ ದುಡಿಯುತ್ತಿರುವವರಿಗೆ 2021-22ನೇ ಸಾಲಿನ ಶೇ 20% ರಷ್ಟು ಬೋನಸ್ ನೀಡಲು ಕೂಡಲೇ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ತ್ವರಿತವಾಗಿ ಕ್ರಮಕೈಗೊಲ್ಲುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಮಹೇಶ್ ರೈ ಮೇನಾಲ, ಪ್ರಮುಖರು, ಕಾರ್ಮಿಕರ ಮುಖಂಡರಾದ ಸುಬ್ಬಯ್ಯ ಬೆಂಗಮಲೆ , ಶಂಕರ್ ಲಿಂಗಮ್ ಕೆ ತೊಡಿಕಾನ, ಷಣ್ಮುಖಂ ಕಲ್ಲುಗುಂಡಿ, ಮಹೇಶ್ವರ ಸೊಣಂಗೇರಿ, ವಾಸು ಐವರ್ನಾಡು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here