ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ವರಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ ಸಹಾಯಧನ ಹಸ್ತಾಂತರ

0

ಪುತ್ತೂರು:ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ವರಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ ವರ್ಷಂಪ್ರತಿ ನೀಡುವ ಸಹಾಯಧನವನ್ನು ಈ ಬಾರಿ ಅನಾರೋಗ್ಯದಿಂದ ಬಳಲುತ್ತಿರುವ ಈಶ್ವರಮಂಗಲ ಜಯರಾಮ ಹರಿಪಳ ಎಂಬವರಿಗೆ 10 ಸಾವಿರವನ್ನು ವೈದ್ಯಕೀಯ ವೆಚ್ಚಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಪೂಜಾ ಸಮಿತಿ ಅಧ್ಯಕ್ಷೆ ಅಮಿತಾ ಸೀತಾರಾಮ ಮನೋಳತ್ತಾಯ, ಉಪಾಧ್ಯಕ್ಷರಾಗಿ ಉಪಾಧ್ಯಕ್ಷೇ ಮೋಹನಾಂಗಿ ಬೀಜಂತಡ್ಕ, ಪ್ರಧಾನ ಕಾರ್ಯದರ್ಶಿ ರತಿ ರಮೇಶ್ ಪೂಜಾರಿ ಮುಂಡ್ಯ ಖಜಾಂಜಿ ಕೋಮಲ ಜತೆ ಕಾರ್ಯದರ್ಶಿ ಗಾಯತ್ರಿ ಚಂದ್ರಶೇಖರ ಗೌಡ ಕಲೆಬೈಲು, ಸಮಿತಿಯ ಸದಸ್ಯರುಗಳಾದ ಪ್ರೇಮ ಜಗನ್ನಾಥ ರೈ ಕಸ್ತೂರಿ ಬಾಲಕೃಷ್ಣ ರೈ, ರೋಹಿಣಿ ಶಿವರಾಮ್ ವಸಂತಿ ಪಟ್ರೋಡಿ, ವೇದಾವತಿ ಶೇಖರ ಮಂಡ್ಯ, ದೀಪಿಕಾ ಗಿರೀಶ್ ರೈ ಶೋಭಾ ರವಿ ಉಪಸ್ಥಿತರಿದ್ದರು. ಧನಸಹಾಯ ಸಹಾಯಧನವನ್ನು ರೋಗಿಯ ಪರವಾಗಿ ಪತ್ನಿ ಮತ್ತು ಸಹೋದರರು ಸ್ವೀಕರಿಸಿದರು.

LEAVE A REPLY

Please enter your comment!
Please enter your name here