ಸವಣೂರು : ಬಿಜೆಪಿಯಿಂದ ಮತದಾರರ ಚೇತನಾ ಅಭಿಯಾನ ಸಭೆ

0

ಅ.2 ರಂದು ಗಾಂಧಿಜಯಂತಿ ಅಂಗವಾಗಿ ಸುಬ್ರಹ್ಮಣ್ಯದಲ್ಲಿ ನದಿ ಸ್ವಚ್ಚತೆ- ಹರೀಶ್‌ಕಂಜಿಪಿಲಿ

ಸವಣೂರು : ಅ.2ರಂದು ಗಾಂಧಿ ಜಯಂತಿಯ ಅಂಗವಾಗಿ ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಸುಬ್ರಹ್ಮಣ್ಯದ ಕುಮಾರಾಧಾರ ನದಿ ಹಾಗೂ ಕನ್ನಡಿ ಹೊಳೆಯ ಸ್ವಚ್ಚತಾ ಕಾರ್ಯ ನಡೆಯಲಿದೆ.ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್‌ಕಂಜಿಪಿಲಿ ಹೇಳಿದರು.ಅವರು ಸವಣೂರು ಯುವಕ ಮಂಡಲದ ಸಭಾಭವನದಲ್ಲಿ ಸೆ.26ರಂದು ನಡೆದ ಮತದಾರರ ಚೇತನಾ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ಮಾತನಾಡಿ,ಪಕ್ಷದ ಕಾರ್ಯಕರ್ತರು ಅ.1ರಿಂದ ಅ.30ರೊಳಗೆ ಹೊಸ ಮತದಾರರ ಸೇರ್ಪಡೆ ಕುರಿತು ವಿಶೇಷ ಗಮನಹರಿಸಬೇಕು ಎಂದರು.ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್‌ರೈ ಕೆಡೆಂಜಿ ಅವರು ಪಕ್ಷ ಸಂಘಟನೆಯ ಕುರಿತು ವಿವಿಧ ಸೂಚನೆಗಳನ್ನು ನೀಡಿದರು.ವೇದಿಕೆಯಲ್ಲಿ ಬಿಜೆಪಿ ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ ಉದನಡ್ಕ ಉಪಸ್ಥಿತರಿದ್ದರು.

ಸಭೆಯಲ್ಲಿ ಕಡಬ ತಾ.ಪಂ.ಮಾಜಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ,  ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್, ನಿಕಟಪೂರ್ವ ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ,ಸದಸ್ಯರಾದ ಗಿರಿಶಂಕರ ಸುಲಾಯ, ಭರತ್‌ರೈ, ತೀರ್ಥರಾಮ ಕೆಡೆಂಜಿ, ಸತೀಶ್‌ಅಂಗಡಿಮೂಲೆ, ಹರೀಶ್‌ ಕಾಯರಗುರಿ, ಚಂದ್ರಾವತಿ ಸುಣ್ಣಾಜೆ , ಇಂದಿರಾ ಬೇರಿಕೆ, ಚೇತನಾ ಪಾಲ್ತಾಡಿ, ವಿನೋದಾ ರೈ , ಹರಿಕಲಾ ರೈ , ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚೇತನ್‌ಕುಮಾರ್‌ಕೋಡಿಬೈಲು, ಪ್ರಕಾಶ್‌ರೈ ಸಾರಕರೆ, ಸವಣೂರು ಗ್ರಾ.ಪಂ.ಮಾಜಿ ಸದಸ್ಯ ಸತೀಶ್‌ಬಲ್ಯಾಯ,ಪ್ರಮುಖರಾದ ಆಶಾ ರೈ ಕಲಾಯಿ, ಗಂಗಾಧರ ಪೆರಿಯಡ್ಕ, ಚೆನ್ನಪ್ಪ ಗೌಡ ಬುಡನಡ್ಕ ,ಪ್ರಜ್ವಲ್‌ಕೆ.ಆರ್‌ಮೊದಲಾದವರಿದ್ದರು.ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಇಂದಿರಾ ಬಿ.ಕೆ. ಸ್ವಾಗತಿಸಿ ,ಪಾಲ್ತಾಡಿ-ಪುಣ್ಚಪ್ಪಾಡಿ ಶಕ್ತಿ ಕೇಂದ್ರದ ಪ್ರಮುಖ್‌ಮಹೇಶ್‌ಕೆ. ಸವಣೂರು ವಂದಿಸಿದರು.

LEAVE A REPLY

Please enter your comment!
Please enter your name here