ಕಬಕ ಹಾ.ಉ. ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

0

ಅಧ್ಯಕ್ಷ: ದಾಮೋದರ ಗೌಡ ನೆಕ್ಕರೆ, ಮೋಹನ ಗೌಡ ಪಿ. ಪೋಳ್ಯ

ಪುತ್ತೂರು: ಕಬಕ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರ.ದ.ಸಹಾಯಕ ವಿಲಾಸ್‌ರವರು ಆಯ್ಕೆ ಪ್ರಕ್ರಿಯೆ ನಡೆಸಿದರು. ಆಡಳಿತ ಮಂಡಳಿಯ ಒಟ್ಟು ಹತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.

ಹಿಂದುಳಿದ ವರ್ಗ ಮೀಸಲು ಸ್ಥಾನದಿಂದ ದಾಮೋದರ ಗೌಡ ನೆಕ್ಕರೆ, ಸಾಮಾನ್ಯ ಮೀಸಲು ಸ್ಥಾನದಿಂದ ಮೋಹನ ಗೌಡ ಪಿ. ಪೋಳ್ಯ, ವಸಂತ ಮುಂಗ್ಲಿಮನೆ, ಪುರುಷೋತ್ತಮ ಮೂವಳ, ಅಬ್ದುಲ್ ಹಮೀದ್ ಪದೆಂಜಾರು, ಪ್ರಸಾದ್ ಕುಮಾರ್ ಎಂ. ಮೂವಳ, ವೇದಾವತಿ ಮೂವಳ, ನೀಲಪ್ಪ ಗೌಡ ಕೆ. ಪೋಳ್ಯ, ಮಹಿಳಾ ಮೀಸಲು ಸ್ಥಾನದಿಂದ ರೂಪಲತಾ ಮೂವಳ, ನೀಲಾವತಿ ಅಲಂದ ಗುಂಡಿರವರು ನಾಮಪತ್ರ ಸಲ್ಲಿಸಿದ್ದರು. ಹತ್ತು ಸ್ಥಾನಗಳಿಗೆ ತಲಾ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಅವಿರೋಧ ಆಯ್ಕೆ ನಡೆಯಿತು. ಸಂಘದ ಕಾರ್ಯದರ್ಶಿ ಕುಮಾರಿ ಗೀತಾ ಎಸ್. ಮತ್ತು ಸಹಾಯಕಿ ಗೀತಾ ಸಹಕರಿಸಿದರು.

ಅಧ್ಯಕ್ಷ/ಉಪಾದ್ಯಕ್ಷರ ಆಯ್ಕೆ:
ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರ ಮತ್ತು ಉಪಾದ್ಯಕ್ಷರ ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ದಾಮೋದರ ಗೌಡ ನೆಕ್ಕರೆ ಹಾಗೂ ಉಪಾಧ್ಯಕ್ಷರಾಗಿ ಮೋಹನ ಗೌಡ ಪಿ. ಪೋಳ್ಯರವರು ಅವಿರೋಧವಾಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here