ಐತ್ತೂರು: ಅಂತಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಮತ್ತು ಸ್ವಚ್ಛತಾ ಕಾರ್ಯಕ್ರಮ

0

ಕಡಬ: ಐತ್ತೂರು ಗ್ರಾಮದ ಅಂತಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಭಾವಚಿತ್ರ ಅನಾವರಣವನ್ನು ನಿವೃತ್ತ ರೈಲ್ವೇ ಅಧಿಕಾರಿ ಪೂವಪ್ಪ ಗೌಡ ಐತ್ತೂರು ನೆರವೇರಿಸಿದರು. ಬಳಿಕ ಪುಟಾಣಿಗಳಿಂದ ಹಾಗೂ ಊರವರಿಂದ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಉದ್ಧೇಶಿಸಿ ಐತ್ತೂರು ಗ್ರಾ.ಪಂ. ಸದಸ್ಯ ಈರೇಶ್ ಗೌಡ ಮಾತನಾಡಿದರು. ನಂತರ ಅಂಗನವಾಡಿ ಪುಟಾಣಿ ಗಳಿಗೆ ಹಾಜರಾತಿ ಸ್ವಚ್ಛತೆ ಕಲಿಕೆ ಮುಂತಾದುದರ ಬಗ್ಗೆ ಹಿರಿಯರಿಂದ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಪರಿಸರದಲ್ಲಿ ಸ್ವಚ್ಛತೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ಪ್ರಿಯ ಜಯಪ್ರಕಾಶ್ ಕೊಡೆಂಕಿರಿ, ಅಂಗನವಾಡಿ ನಿರ್ವಾಹಕಿ ದೇವಕಿ, ಗ್ರಾಮಸ್ಥರಾದ ಪೂವಪ್ಪ ಗೌಡ ಅಂತಿಬೆಟ್ಟು, ಮೋನಪ್ಪ ಗೌಡ, ಗೋಪಾಲ ಗೌಡ, ವಿನಯ ಐತ್ತೂರು, ವಿಜಯ ಕಲ್ಲಾಜೆ, ಸಂಧ್ಯಾ ಅಂತಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ದುಗ್ಗಪ್ಪ ಗೌಡ ಅಂತಿಬೆಟ್ಟು ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ದೇವಕಿ ವಂದಿಸಿದರು.

LEAVE A REPLY

Please enter your comment!
Please enter your name here