ಪಾಲ್ತಾಡಿ :  ಬಂಬಿಲ ಶ್ರೀ ಮಹಾಮ್ಮಾಯಿ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಅನುಜ್ಞಾ ಕಲಶ

0

ಸವಣೂರು : ಪಾಲ್ತಾಡಿ ಗ್ರಾಮದ ಬಂಬಿಲ ಶ್ರೀ ಮಹಾಮ್ಮಾಯಿ ಮಾರಿಯಮ್ಮ ದೇವಸ್ಥಾನದ ಜೀರ್ಣೊದ್ಧಾರ ಹಿನ್ನೆಲೆಯಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾಕಲಶ, ಗಣಪತಿ ಹೋಮ ಮತ್ತು ಬಾಲಾಲಯ ಪ್ರತಿಷ್ಠೆ ನಡೆಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಕುಮಾರ್ ಆರಿಗ ಬಂಬಿಲಗುತ್ತು, ಅಧ್ಯಕ್ಷೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ದೇವಸ್ಥಾನದ ಮೊಕ್ತೇಸರ  ಬಲ್ಲು ಬಂಬಿಲ, ಜೀರ್ಣೊದ್ಧಾರ ಸಮಿತಿಯ ಕಾರ್ಯಾಧ್ಯಕ್ಷ  ಸುರೇಶ ರೈ ಸೂಡಿಮುಳ್ಳು, ಸಂ‍ಚಾಲಕ ಗಿರಿಶಂಕರ ಸುಲಾಯ, ಸಹಸಂಚಾಲಕ ಸತೀಶ್ ಅಂಗಡಿ ಮೂಲೆ, ಗೌರವ ಸಲಹೆಗಾರರಾದ ರಾಮಕೃಷ್ಣ ಪ್ರಭು, ಶಿವರಾಮ ಗೌಡ ಮೆದು, ಶೇಖರ ಶೆಟ್ಟಿ ಬಂಬಿಲ. ರತ್ನರಾಜ ಆರಿಗ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಂಬಿಲ, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕುಶಾಲಪ್ಪ‌ ಬಿ.ಎಮ್ ಮತ್ತು ಕೂಡು ಕಟ್ಟಿನ ಸಮಸ್ತರು ಮತ್ತು ಬಂಬಿಲ‌ ಕುಟುಂಬಸ್ಥರು ಪಾಲ್ಗೋಂಡಿದ್ದರು. 

LEAVE A REPLY

Please enter your comment!
Please enter your name here