ಕೊಯಿಲ- ಬಡಗನ್ನೂರು ಸ.ಹಿ.ಪ್ರಾ.ಶಾಲೆಯಲ್ಲಿ ಗಾಂಧೀ ಜಯಂತಿ – ಸ್ವಚ್ಚತಾ ಕಾರ್ಯಕ್ರಮ

0

ಬಡಗನ್ನೂರು: ಕೊಯಿಲ- ಬಡಗನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.2ರಂದು ಗಾಂಧಿ ಜಯಂತಿಯನ್ನು ಶ್ರಮದಾನದ ಮೂಲಕ ಆಚರಿಸಲಾಯಿತು. ಗಾಂಧಿಜೀ ಹಾಗೂ ನೆಹರು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಪಡುಮಲೆ ಮರಾಟಿ ಸೇವಾ ಸಂಘದ ವತಿಯಿಂದ  ಶಾಲಾ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛತೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪಡುಮಲೆ ಮರಾಠಿ ಸಂಂಘದ ಅಧ್ಯಕ್ಷ  ಅಪ್ಪಯ್ಯ ನಾಯ್ಕ ತಲೆಂಜಿ, ಕಾರ್ಯದರ್ಶಿ ನಾರಾಯಣ ನಾಯ್ಕ ಪೇರಾಲು, ಕೋಶಾಧಿಕಾರಿ    ಶ್ರೀಧರ ನಾಯ್ಕ ನೇರ್ಲಂಪಾಡಿ, ಸದಸ್ಯರಾದ ಈಶ್ವರ ನಾಯ್ಕ ಕೊಡೆಂಕಿರಿ, ಬಾಲಕೃಷ್ಣ ಮುಂಡೋಳೆ, ನಾಗೇಶ ಡಿ.ಕೆ ತಲೆಂಜಿ, ವಿಜಯ ಸೋಣಂಗೇರಿ , ನಿತಿನ್ ತಲೆಂಜಿ, ಜಯಂತ್ ನಾಯ್ಕ ತಲೆಂಜಿ, ಗೋಪಾಲ ನಾಯ್ಕ ದೊಡ್ಡಡ್ಕ, ಜಾನಕಿ ಪಟ್ಟೆ, ಕುಸುಮಾವತಿ ತಲೆಂಜಿ, ಜಯಂತಿ ಮುಂಡೋಳೆ, ಸುಶೀಲ ಸೋಣಂಗೇರಿ, ಸುಂದರ ತಲೆಂಜಿ, ಶಾಲಾ ಎಸ್ ಡಿಎಂಸಿ ಅಧ್ಯಕ್ಷ  ಸತೀಶ್ ನಾಯ್ಕ ತಲೆಂಜಿ, ಸದಸ್ಯೆ ಲಲಿತ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಯಶೋಧ ಬಡಕ್ಕಾಯೂರು, ಮತ್ತು ವಿನಯ ಕೊಯಿಲ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಎಂ ಬಿ ಸರ್ವರಿಗೂ ಸ್ವಾಗತಿಸಿ, ವಂದಿಸಿದರು. ಶಿಕ್ಷಕವೃಂದ ಮಕ್ಕಳು ಅಡುಗೆ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here