ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘದ ಉಪ್ಪಿನಂಗಡಿ ಶಾಖಾ ಮುಖ್ಯಸ್ಥರಾಗಿ ಬಾಬು ಎಂ.ಕೆಯ್ಯೂರು

0

ಪುತ್ತೂರು: ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘದ ಮಂಗಳೂರು ಇದರ ಉಪ್ಪಿನಂಗಡಿ ಶಾಖಾ ಮುಖ್ಯಸ್ಥರಾಗಿ ಬಾಬು ಎಂ.ಕೆಯ್ಯೂರು ಅ.7ರಂದು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘದ ವಿವಿಧ ಶಾಖೆ ಮತ್ತು ವಿಭಾಗದಲ್ಲಿ ಕರ್ತವ್ಯದಲ್ಲಿರುವ ಹಲವು ಸಿಬ್ಬಂದಿಗಳ ಬಡ್ತಿ , ವರ್ಗಾವಣೆ ಮತ್ತು ಕರ್ತವ್ಯ-ಜವಾಬ್ದಾರಿ ನಿಗದಿ ಮಾಡಿದೆ.

ಸಂಘದ ಉಪ್ಪಿನಂಗಡಿ ಶಾಖೆಯ ಜಾಯಿಂಟ್ ಕಸ್ಟೋಡಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜ್ಯೂನಿಯರ್ ಮೆಕ್ಯಾನಿಕ್ ಕೆಯ್ಯೂರು ನಿವಾಸಿ  ಬಾಬು ಎಂ ಅವರು  ಶಾಖೆಯ ಮುಖ್ಯಸ್ಥರಾಗಿ ಭಡ್ತಿ ಹೊಂದಿದ್ದಾರೆ. ಇವರು ಅ. 7ರಿಂದ ಉಪ್ಪಿನಂಗಡಿ ಶಾಖಾ ಮುಖ್ಯಸ್ಥರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here