ರಸ್ತೆ ಬದಿ ಕಸ ಹಾಕುತ್ತಿದ್ದವರಿಗೆ ದಂಡ ವಿಧಿಸಿದ ಕೆಯ್ಯೂರು ಗ್ರಾ.ಪಂ

0

ಪುತ್ತೂರು: ರಸ್ತೆ ಬದಿಗೆ ಕಸ ಹಾಕುತ್ತಿದ್ದವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಕೆಯ್ಯೂರು ಗ್ರಾ.ಪಂ ಅಧಿಕಾರಿ ವರ್ಗ ಅವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಪ್ರತ್ಯೇಕ ಎರಡು ಪ್ರಕರಣಗಳು ನಡೆದಿದ್ದು, ಮಾಡಾವು ಸೇತುವೆ ಬಳಿ ಹಾಗೂ ಕೆಯ್ಯೂರು ಸಂತೋಷ್‌ನಗರದ ಬಳಿ ರಸ್ತೆ ಬದಿಗೆ ಕಸ, ತ್ಯಾಜ್ಯ ಹಾಕುತ್ತಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಕೆಯ್ಯೂರು ಗ್ರಾ.ಪಂ ತಂಡವು ಕಸ ಹಾಕಿದವರಿಗೆ ದಂಡ ವಿಧಿಸಿದ್ದಾರೆ. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ ಹಾಗೂ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here