ಬೊಳುವಾರು ಕ್ಷೇತ್ರದಲ್ಲಿ ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆ, ಮೇಲ್ಛಾವಣಿ ಶೀಟ್ ಹೊದಿಕೆಯ ಕಾಮಗಾರಿ ಮುಹೂರ್ತ

0


ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಅ.೧೫ರಿಂದ ಅ.೨೪ರವರೆಗೆ ನಡೆಯಲಿರುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಅ.5ರಂದು ಕ್ಷೇತ್ರದಲ್ಲಿ ನಡೆಯಿತು.
ಶೀಟ್ ಹೊದಿಕೆ ಕಾಮಗಾರಿಗೆ ಮುಹೂರ್ತ: ಸುಮಾರು 15ರಿಂದ 18 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಸುತ್ತು ಹೊರಾಂಗಣದ ಮೇಲ್ಛಾವಣಿಗೆ ಶೀಟ್ ಹೊದಿಕೆಯ ಕಾಮಗಾರಿಗೆ ಮುಹೂರ್ತ ಮಾಡಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಧರ ಭಟ್ ದೇವತಾ ಪ್ರಾರ್ಥನೆಯೊಂದಿಗೆ ಮುಹೂರ್ತ ನೆರವೇರಿಸಿದರು.
ಅರ್ಚಕ ಶಂಕರ ನಾರಾಯಣ ಭಟ್, ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ಕ್ಷೇತ್ರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್, ಪ್ರಧಾನ ಕಾರ್ಯದರ್ಶಿ ವಿ.ಕೆ. ಶೆಟ್ಟಿ, ಕೋಶಾಧಿಕಾರಿ ಪ್ರಸನ್ನಕುಮಾರ್ ಬಳ್ಳಾಲ್, ಟ್ರಸ್ಟಿಗಳಾದ ಮನೋಹರ್ ರೈ, ಸುಂದರ ನಾಯ್ಕ್, ದಿನೇಶ್ ಕರ್ಮಲ, ಬೇಬಿ ಪೂಜಾರಿ, ಜಲಜಾಕ್ಷಿ ಹೆಗ್ಡೆ, ಕ್ಷೇತ್ರ ಭಜನಾ ಮಂಡಳಿ ಸದಸ್ಯರಾದ ಶಕುಂತಳಾ ವಿ.ಕೆ. ಶೆಟ್ಟಿ, ಉಷಾ ಭಂಡಾರಿ, ಯಕ್ಷಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ನಾಯಕ್ ಪಾಲೆಚ್ಚಾರು, ಕಾರ್ಯದರ್ಶಿ ಶಂಕರ್ ಭಟ್, ಸ್ಥಳೀಯರಾದ ಕಿರಣ್ ಉರ್ಲಾಂಡಿ, ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here