ಜೆಸಿಐ ವಿಟ್ಲ ಘಟಕದಿಂದ ವಿಟ್ಲ ಪರಿಸರದ ಮೌನ ಸಾಧಕರಿಗೆ ಸನ್ಮಾನ

0

ವಿಟ್ಲ: ಜೆಸಿಐ ಸಪ್ತಾಹ 2023ರ ಪ್ರಯುಕ್ತ ಜೆಸಿಐ ವಿಟ್ಲ ಘಟಕದಿಂದ ವಿಟ್ಲ ಪರಿಸರದಲ್ಲಿ ಕಳೆದ 35 ವರ್ಷಗಳಿಂದ ಆಟೋ ಚಾಲಕರಾಗಿ ಸೇವೆಸಲ್ಲಿಸುತ್ತಿರುವ ರಾಮಚಂದ್ರ ಭಟ್, ವಿಠಲ ಶೆಟ್ಟಿ ,ಕಳೆದ 57 ವರ್ಷಗಳಿಂದ ದಿನಪತ್ರಿಕೆ ವಿತರಿಸುತ್ತಿರುವ ಜಗದೀಶ್ ಭಟ್, 37ವರ್ಷಗಳಿಂದ ದಿನಪತ್ರಿಕೆಗಳ ಹಂಚಿಕೆದಾರರಾಗಿರುವ ರಾಜಮ್ಮ, 25 ವರ್ಷಗಳಿಂದ ವಾಹನ ಚಾಲಕ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಅಸ್ಲಾಂ ರವರುಗಳನ್ನು ಸನ್ಮಾನಿಸಲಾಯಿತು.

ಜೆಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷ ರಶೀದ್ ವಿಟ್ಲ ರವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಪೂರ್ವಾಧ್ಯಕ್ಷ ವಿಜಯ್ ಪಾಯಸ್, ದಿನೇಶ್ ವಿ.ಮುಖ್ಯ ಅತಿಥಿಗಳಾಗಿ ಆಗಮಿಸಿ ಉಪಸ್ಥಿತರಿದ್ದರು.ಜೆಸಿಐ ವಿಟ್ಲ ಘಟಕದ ಅಧ್ಯಕ್ಷ ಪರಮೇಶ್ವರ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಪ್ತಾಹದ ನಿರ್ದೇಶಕ ರಿತೇಶ್ ಶೆಟ್ಟಿ,ಕಾರ್ಯದರ್ಶಿ ದೀಕ್ಷಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here