ಆಲಂಕಾರು ಬಿಲ್ಲವ ಸಂಘದ ವತಿಯಿಂದ ರಕ್ತದಾನ ಶಿಬಿರ

0

ಆಲಂಕಾರು: ಬ್ರಹ್ಮ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಆಲಂಕಾರು ಇದರ ಆಶ್ರಯ ದಲ್ಲಿ ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಯಕ್ಕೆ ಶುಭಾಹಾರೈಸಿದರು. ಬಿಲ್ಲವ ಸಂಘ ದ ಅಧ್ಯಕ್ಷ ದಿನೇಶ್ ಕೇಪುಳು, ಪುತ್ತೂರು ತಾಲೂಕು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ, ಕೋಟಿ ಚೆನ್ನಯ ಮಿತ್ರ ವೃಂದ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ, ಪೆರಾಬೆ ಗ್ರಾಮ ಸಮಿತಿಯ ಅಧ್ಯಕ್ಷ ಹರ್ಷಿತ್ ಮಾಯಿಲ್ಗ, ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಪೂಜಾರಿ, ಮಹಿಳಾ ವೇದಿಕೆ ಸಂಚಾಲಕರಾದ, ಪ್ರಮಿಳ ಜಯಂತ್ ಉಪಸ್ಥಿತರಿದ್ದು ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ರಾಮಚಂದ್ರ ಭಟ್ ರಕ್ತದಾನದ ಮಹತ್ವ ತಿಳಿಸಿದರು.
ಜಯಂತ ಪೂಜಾರಿ, ನೆಕ್ಕಿಲಾಡಿ ಕೆಳಗಿನಮನೆ ಸ್ವಾಗತಿಸಿ, ಲಿಂಗಪ್ಪ ಪೂಜಾರಿ ನೆಯ್ಯಲ್ಗ ವಂದಿಸಿದರು.ಒಟ್ಟು 39 ಮಂದಿ ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here