ಇಂಚರ ರೈತ ಉತ್ಪಾದಕರ ಕಂಪನಿಯ ಪ್ರಥಮ ವಾರ್ಷಿಕ ಮಹಾಸಭೆ

0

ವಿಟ್ಲ: ಇಂಚರ ರೈತ ಉತ್ಪಾದಕರ ಕಂಪನಿ ನಿಯಮಿತದ 2022-23ನೇ ಸಾಲಿನ ಪ್ರಥಮ ವಾರ್ಷಿಕ ಮಹಾಸಭೆಯು ಮಾಣಿ ಕುಲಾಲ ಸಂಘದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪ್ರಕಾಶ್ ಕೆ.ಎಸ್ ಉರಿಮಜಲುರವರು ವಹಿಸಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಕೆ.ಎನ್. ಗಂಗಾಧರ ಆಳ್ವ, ವಸಂತಿ ಸಂಜೀವ ಪೂಜಾರಿ, ಜನಾರ್ಧನ ನಾಯ್ಕ ಪೆರಾಜೆ, ಉಮೇಶ್ ಪಿ, ರೋಹಿತಾಶ್ವ, ರಮಣಿ ಲೋಬೋ, ಜನಾರ್ಧನ ನಲಿಕೆ, ರೂಪೇಶ್ ರೈ, ಅದ್ದ ಕೊಡಾಜೆ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಗೌತಮ್ ಶೆಣೈರವರು 2022-23ನೇ ವರ್ಷದ ಆಡಳಿತ ಮಂಡಳಿ ವರದಿ ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ವಾಚಿಸಿದರು. ರಾಮಕೃಷ್ಣ ರವರು(ಸಿಬಿಬಿಒ)ನಬಾರ್ಡ್‌ನ ಬಗ್ಗೆ ಮಾಹಿತಿ ನೀಡಿದರು. ಅನನ್ಯಾ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಕೆ.ಎಸ್ ಉರಿಮಜಲು ಸ್ವಾಗತಿಸಿದರು. ಸಂಘದ ಲೆಕ್ಕಸಹಾಯಕಿ ನಳಿನಿ ವಂದಿಸಿದರು.

LEAVE A REPLY

Please enter your comment!
Please enter your name here