ಪುರುಷರಕಟ್ಟೆ ಉದಯಭಾಗ್ಯ ಹೊಟೇಲ್ ಮ್ಹಾಲಕ ಸುರೇಶ್ ಪ್ರಭುರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು:ಪುರುಷರಕಟ್ಟೆ ಉದಯಭಾಗ್ಯ ಹೋಟೇಲ್ ಮ್ಹಾಲಕ ಪುರುಷರಕಟ್ಟೆ ನಿವಾಸಿ ಸುರೇಶ್ ಪ್ರಭುರವರ ಶ್ರದ್ಧಾಂಜಲಿ ಸಭೆಯು ಅ.13ರಂದು ಮಧ್ಯಾಹ್ನ ಮೃತರ ನಿವಾಸದಲ್ಲಿ ನಡೆಯಿತು.


ಸರ್ವೆ ಎಸ್‌ಜಿಎಂ ಪ್ರೌಢ ಶಾಲಾ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ನುಡಿ ನಮನ ಸಲ್ಲಿಸಿ ಸುರೇಶ್ ಪ್ರಭುರವರು ಬಡತನದಿಂದ ಬಂದು ಶ್ರಮ ಜೀವಿಯಾಗಿ ಬೆಳೆದು ಯಶಸ್ವಿ ಉದ್ಯಮಿಯೇನಿಸಿದವರು. ಸಾಮಾಜಿಕ, ಧಾರ್ಮಿಕವಾಗಿ ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿ ಗುರುತಿಸಿಕೊಂಡವರು. ಬಡವರ ಹಸಿವು ನೀಗಿಸಿದವರು. ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಸಮಾಜದಲ್ಲಿ ಸಾಮರಸ್ಯದಿಂದ ಬಾಳಿ ಬೆಳೆದು ಆದರ್ಶವಾಗಿದ್ದಾರೆ. ಇದರಿಂದಾಗಿ ಅವರ ಹೆಸರು ಚಿರಸ್ಥಾಯಿಯಾಗಿದೆ ಎಂದರು.


ಮೃತರ ಪತ್ನಿ ಗೀತಾ ಪ್ರಭು, ಪುತ್ರ ದೇವಿಕಿರಣ್ ಪ್ರಭು, ಸೊಸೆ ವಾಣಿ ದೇವಿಕಿರಣ್, ಪುತ್ರಿಯರಾದ ರೂಪಾ ರಮಾನಂದ ಶೆಣೈ, ದೀಪ ಉಮೇಶ್ ನಾಯಕ್, ವಿದ್ಯಾ ಪ್ರಶಾಂತ್ ಸಾಮಂತ್, ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here