ಗೆಜ್ಜೆಗಿರಿ ನವರಾತ್ರಿ ಮಹೋತ್ಸವ ಉದ್ಘಾಟನೆ

0

ಬಡಗನ್ನೂರುಃ  ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವವು ಬೆಳಗ್ಗೆ ಗಣಪತಿ ಹವನ ತೆನೆ ಕಟ್ಟುವ ಮೂಲಕ  ಅ.15 ರಂದು ಆರಂಭಗೊಂಡಿತು. ನವರಾತ್ರಿ ಮಹೋತ್ಸವವನ್ನು ಮೇಲ್ಕಾರ್ ಬಿರ್ವ ಸೆಂಟರ್ ಮಾಲಕ ಕೆ  ಸಂಜೀವ ಪೂಜಾರಿ ಯವರು ದೀಪ ಬೆಳಗಿಸಿ  ಉದ್ಘಾಟಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ,  ಕ್ಷೇತ್ರದ ಪ್ರಧಾನ ಅರ್ಚಕ ಶಿವಾನಂದ ಶಾಂತಿ, ಪ್ರಮುಖರಾದ ನವೀನ್ ಸುವರ್ಣ, ಪ್ರವೀಣ್ ಪೂಜಾರಿ ಮೂಡಿಗೆರೆ, ಕೃಷ್ಣಪ್ಪ ಪೂಜಾರಿ, ಜಯಶ್ರೀ ಉಪ್ಪಿನಂಗಡಿ, ವಿಶ್ವನಾಥ ಪೂಜಾರಿ ಮೂಡಿಗೆರೆ, ನಾರಾಯಣ ಮಚ್ಚಿನ ಹಾಗೂ ನೂರಾರು ಕ್ಷೇತ್ರದ ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ತಮ್ಮ ಪ್ರಸ್ತಾವನೆಯಲ್ಲಿ ಕ್ಷೇತ್ರ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾವಿಸಿದರು. ಮಾತುಗಳನ್ನಾಡಿದರು ಉಪಾಧ್ಯಕ್ಷ  ರವಿಪೂಜಾರಿ ಚಿಲಿಂಬಿ ವಂದಿಸಿದರು.

LEAVE A REPLY

Please enter your comment!
Please enter your name here