ಕೊಯಿಲ ಸರಕಾರಿ ಶಾಲೆಯಲ್ಲಿ ಶೌರ್ಯ ವಿಪತ್ತು ತಂಡದ ಮಾಸಿಕ ಸಭೆ, ಸ್ವಚ್ಚತಾ ಕಾರ್ಯ

0

ಬಡಗನ್ನೂರು:ಅರಿಯಡ್ಕ ವಲಯದ ಗಜಕೇಸರಿ ಶೌರ್ಯ ವಿಪತ್ತು ತಂಡದ ತಿಂಗಳ ಮಾಸಿಕ ಸಭೆ ನಡೆಯಿತು. ಹೊಸ ಸಂಯೋಜಕರ ಆಯ್ಕೆ ಮಾಡಿ ಜವಾಬ್ದಾರಿ ಹಸ್ತಾಂತರ ಮಾಡಲಾಯಿತು. ನೂತನ ಸಂಯೋಜಕರಾಗಿ ಸೇವಾ ಪ್ರತಿನಿಧಿ ಪುಷ್ಪಲತಾ ಇವರು ಆಯ್ಕೆಯಾದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಪುಷ್ಪವತಿ ಮತ್ತು ಸಹಶಿಕ್ಷಕರಾದ ಗಿರೀಶ್ ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ ಭಾಗವಸಿದರು. ಅರಿಯಡ್ಕ ವಲಯದ ಮೇಲ್ವಿಚಾರಕ ಹರೀಶ್ ಕುಲಾಲ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿ ಮುಂದಿನ ಸೇವಾ ಕಾರ್ಯಗಳಿಗೆ ಶುಭಹಾರೈಸಿದರು.‌

ಬಡಗನ್ನೂರು ಗ್ರಾಮದ ಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ವಚ್ಛತೆ ಮತ್ತು ಅಡಿಕೆ ತೋಟಕ್ಕೆ ತೊಂದರೆ ಆಗುವ ಮರಗಳನ್ನು ಕಡಿಯುವ ಕೆಲಸವನ್ನು ಮಾಡಿದರು.

ಶೌರ್ಯ ತಂಡದ ಪ್ರತಿನಿಧಿ ಶಿವಶಂಕರ ಕುಲಾಲ್ , ಹಾಗೂ ಸದಸ್ಯರಾದ ಚಂದ್ರಾವತಿ ಕೆ,ರವೀಂದ್ರ ಪಟ್ಟೆ,ರಮನಂದ ಕೆ,ಅಜಿತ್ ,ನಿತಿನ್ ರಾಜ್, ಸವಿತ ಕೆ,ವಸಂತ ಮುಗೇರ,ಗಣೇಶ್ ಪಿ, ಸೀತಾರಾಮ,ವಸಂತ ಪಟ್ಟೆ,ಹರಿಪ್ರಸಾದ್ ರೈ,ವಸಂತಿ,ರಾಜೇಶ್,ಪ್ರವೀಣ್, ಪುಷ್ಪ,ರಮೇಶ್ ರೈ,ಕೃಷ್ಣ, ಮತ್ತು ಪ್ರಮೀಳಾ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here