ಪಡ್ನೂರು ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಪಡ್ನೂರಿನಲ್ಲಿ ನ.4 ಮತ್ತು5 ರಂದು ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮೈಲೈಸಲಿರುವ ಶ್ರೀ ಜನಾರ್ದನ ಯುವಕ ಮಂಡದ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆಯು ಅ.15ರಂದು ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.

ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ದೇಂತಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀಧರ ಕುಂಜಾರು, ಗೌರವಾಧ್ಯಕ್ಷ ವಿಶ್ವನಾಥ ಪಟ್ಟೆ, ದೇವಸ್ಥಾನದ ಅರ್ಚಕ ಶ್ರೀಕಾಂತ್ ಭಟ್, ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು, ಸರಸ್ವತಿ ಯುವತಿ ಮಂಡಲದ ಗೌರವಾಧ್ಯಕ್ಷೆ ಸಾವಿತ್ರಿ ಕೊಡಂಗೆ, ಬನ್ನೂರು ಗ್ರಾ.ಪಂ ಸದಸ್ಯೆ ರಮಣಿ ಡಿ.ಗಾಣಿಗ, ಯುವಕ ಮಂಡಲದ ಸದಸ್ಯರಾದ ರವಿರಾಜ್ ಕುಂಜಾರು, ರಾಜೇಶ್ ಬೇರಿಕೆ, ರಾಧಾಕೃಷ್ಣ ಕುಂಜಾರು, ಲಕ್ಷ್ಮಣ ದೇಂತಡ್ಕ, ಅಶ್ವಥ್, ವೀಕ್ಷಿತ್ ಕುಂಜಾರು, ಸುಧಾಕರ ದೇಂತಡ್ಕ, ಹರ್ಷಿತ್ ಕಡ್ತಿಮಾರ್, ಅವಿನಾಶ್ ಕಡ್ತಿಮಾರ್, ರಂಜಿತ್ ಕಡ್ತಿಮಾರ್, ಗಣೇಶ್ ಕುಂಜಾರು, ಶ್ಯಾಂಪ್ರಸಾದ್ ಪಂಜಿಗುಡ್ಡೆ, ಸತೀಶ್ ಪೊಟ್ಟಗುಳಿ, ಜಗದೀಶ ಆಟಿಕ್ಕು, ಕಿಶೋರ್ ಕುಂಜಾರು, ಆಶ್ರಯ್ ಪಟ್ಟೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here